ಚಳ್ಳಕೆರೆ : ಗೆಳೆಯರೊಂದಿಗೆ ನದಿ ನೀಡಿನಲ್ಲಿ ಈಜಾಡಲು ಹೋಗಿ ಸಾವನ್ನಪ್ಪಿದ ಬಾಲಕ
ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ಟಿ.ತೇಜು (13) ಎಂಬ ಬಾಲಕ ತನ್ನ ಸ್ನೇಹಿತರೊಂದಿಗೆ ನದಿನೀರಿನಲ್ಲಿ ಈಜಾಡಲು ಹೋಗಿ ಆಯತಪ್ಪಿ ನೀಡಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ
ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಭಾನುವಾರ ರಜೆಯಲ್ಲಿ ಸ್ನೇಹಿತರೊಂದಿಗೆ ಸಮೀಪದ ನದಿಯಲ್ಲಿ ಈಜಾಡಲು ಹೋಗಿ ಮೃತನಾದ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದಾವಿಸಿ ಶವವನ್ನು ನದಿಯಿಂದ ಮೆಲಕ್ಕೆ ತೆಗೆದಿದ್ದಾರೆ.
ಇನ್ನೂ ಬಾಲಕನ ಸುದ್ಧಿ ತಿಳಿದ ಗ್ರಾಮದ ಜನರಲ್ಲಿ ಮೌನ ಮನೆಮಾಡಿತ್ತು.

