“ಭಗವಂತನ ಸಾಕ್ಷಾತ್ಕಾರಕ್ಕೆ ವ್ಯಾಕುಲತೆಯೆ ಮೂಲಸೆಲೆ” :-ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ. ಚಳ್ಳಕೆರೆ:-ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತನಾದವನು ವ್ಯಾಕುಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ”ಭಾಗ-೨ರ ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು. ಮಗು ತಾಯಿಗಾಗಿ ವ್ಯಾಕುಲತೆ ಪಡುವಂತೆ ನಾವು ದೇವರಿಗಾಗಿ ಕಂಬನಿ ಸುರಿಸಬೇಕು. ಗುರುವೆ ಸಚ್ಚಿದಾನಂದನಾಗಿದ್ದು ಅವನ ಮಾತಿನಲ್ಲಿ ವಿಶ್ವಾಸವಿಟ್ಟು ಮುಂದುವರಿದರೆ ಭಗವಂತ ದೊರೆತುಬಿಡುತ್ತಾನೆ ಎಂದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ , ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ ಶಾಂತಕುಮಾರ್, ಸುಧಾಮಣಿ,ವಿವಿಕ್ತ, ವೆಂಕಟಲಕ್ಷ್ಮೀ, ಡಾ.ಭೂಮಿಕಾ,ಯತೀಶ್ ಎಂ ಸಿದ್ದಾಪುರ,ಚೇತನ್, ಜಿ.ಯಶೋಧಾ ಪ್ರಕಾಶ್,ಋತಿಕ್ ಕುಮಾರ್, ಪುಷ್ಪಲತಾ,ಹುಜೇರ್ ಅಹಮದ್ ಭಾಗವಹಿಸಿದ್ದರು.

