ಚಳ್ಳಕೆರೆ :
ಚಿತ್ರದುರ್ಗ: ಶೋಭಾಯಾತ್ರೆ ಉದ್ಘಾಟಿಸಲಿರುವ
ಯದುವೀರ ಒಡೆಯರ್
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ
ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ
ವಿಸರ್ಜನೆ ಮತ್ತು ಶೋಭಾ ಯಾತ್ರೆ ನಾಳೆ ನಡೆಯಲಿದೆ. ಮೈಸೂರು
ಮಹಾರಾಜ ಯದುವೀರ ಒಡೆಯರ್ ಅವರು ಬೆಳಗ್ಗೆ 10 ಗಂಟೆಗೆ
ಶೋಭಾ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಈ ಯಾತ್ರೆಯಲ್ಲಿ
20ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ. ಈ ವರ್ಷವೂ
ಶೋಭಾ ಯಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು
ತಿಳಿಸಲಾಗಿದೆ.

