ಚಳ್ಳಕೆರೆ :ಚಿತ್ರದುರ್ಗ: ಗಮನ ಸೆಳೆಯುತ್ತಿರುವ
ಸಿಂಧೂರ ಮಾದರಿ
ಚಿತ್ರದುರ್ಗದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ
ನೇತೃತ್ವದಲ್ಲಿ ಇದೇ 13 ರಂದು ಹಿಂದೂ ಮಹಾ ಗಣಪತಿ ವಿಸರ್ಜನೆ
ಮತ್ತು ಶೋಭಾ ಯಾತ್ರೆ ನಡೆಯಲಿದೆ. ನಗರದ ಪ್ರಮುಖ ವೃತ್ತಗಳಿಗೆ
ಅದ್ದೂರಿ ಅಲಂಕಾರ ಮಾಡಲಾಗಿದ್ದು, ಮದಕರಿ ಪ್ರತಿಮೆಯ ಬಳಿ
ಪಾಕಿಸ್ತಾನದ ಮೇಲಿನ ‘ಅಪರೇಷನ್ ಸಿಂಧೂರ’ದ ಪ್ರತಿಕೃತಿಯನ್ನು
ನಿಲ್ಲಿಸಲಾಗಿದೆ. ಭಾರತ ಮಾತೆ, ಸೇನೆಯ ಟ್ಯಾಂಕರ್ ಗಳು ಮತ್ತು
ಆಕಾಶ್ ಯುದ್ಧ ವಿಮಾನಗಳ ಮಾದರಿಗಳನ್ನು ಸಾಗರದ ಕಲಾವಿದ
ಸಾಗರ್ ತಂಡ ನಿರ್ಮಿಸಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.

