ಚಳ್ಳಕೆರೆ :
ಚಿತ್ರದುರ್ಗ: ಎಸ್ಸಿಪಿ ಟಿಎಸ್ಪಿ ಹಣವನ್ನು ಭದ್ರಾ
ಯೋಜನೆಗೆ ಕೊಡಿ
ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಅಧ್ಯಕ್ಷ
ಬಿ.ಎ. ಲಿಂಗಾರೆಡ್ಡಿ ಅವರು, ಚಿತ್ರದುರ್ಗದ ಮಹತ್ವಾಕಾಂಕ್ಷ
ಭದ್ರಾ ಯೋಜನೆಗೆ ಹಣವಿಲ್ಲ ಎಂದು ಹೇಳುವ ಬದಲು,
ಎಸ್ಸಿಪಿ ಟಿಎಸ್ಪಿ ಹಣ ಬಿಡುಗಡೆ ಮಾಡಿದರೆ ಯೋಜನೆಯನ್ನು
ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಜಿಲ್ಲೆಯೂ
ಎಸ್ಸಿ, ಎಸ್ಟಿ ಸಮುದಾಯದವರನ್ನು ಒಳಗೊಂಡಿದೆ. ಆ ಹಣವನ್ನು
ನೀಡಿದರೆ ದುರುಪಯೋಗವಾಗುವುದಿಲ್ಲ. ಆದ್ದರಿಂದ ಮೀಸಲು
ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

