ಚಳ್ಳಕೆರೆ :
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಎಸ್ ಸಿಪಿ
ಟಿಎಸ್ ಪಿ ಹಣ ಬಳಸಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಚ್ಛಾ ಶಕ್ತಿ ಕೊರತೆಯಿಂದ
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ ಎಂದು
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ. ಲಿಂಗಾ
ರೆಡ್ಡಿ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ
ಅವರು, ತುಂಗಭದ್ರ ಹಿನ್ನೀರು ಯೋಜನೆಗೆ ಎಸ್ಇಪಿಟಿಎಸ್ಪಿ
ಅನುದಾನ ಬಳಸಿದಂತೆ ಭದ್ರಾ ಮೇಲ್ದಂಡೆ ಯೋಜನೆಗೂ ಮೀಸಲು
ಅನುದಾನ ಬಳಸಬೇಕು ಎಂದು ಒತ್ತಾಯಿಸಿದರು. 5300 ಕೋಟಿ
ರೂ. ಅನುದಾನದ ಕೊರತೆಯಿಂದ ಮಹತ್ವಾಕಾಂಕ್ಷಿ ಯೋಜನೆ
ಸೊರಗಿದೆ ಎಂದು ಅವರು ತಿಳಿಸಿದರು.

