ಸಂವಾದ ಯುವ ಸಂಪನ್ಮೂಲ ಕೇಂದ್ರ ದಾವಣಗೆರೆ ಮತ್ತು ಚಿತ್ರದುರ್ಗ ವತಿಯಿ

ಚಿತ್ರದುರ್ಗ:: ಚಿತ್ರದುರ್ಗ ನಗರದ- ಅಲೆಮಾರಿ ಸಮುದಾಯ ಮತ್ತು ಚಳ್ಳಕೆರೆ ತಾಲೂಕಿನ ಕೆರೆಯೂಗಳಹಳ್ಳಿ ಲಂಬಾಣಿ ತಾಂಡ್ಯ ಹಾಗೂ ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಾಗೂ ಪಟ್ಟಣದ 5ನೇ ವಾರ್ಡಿನ ಕೂರಚ, ಸುಡುಗಾಡು ಸಿದ್ದರು ಮೂಂಡರು, ದೂಂಬಿದಾಸರು, ಅಲೆಮಾರಿ ಅರೆಅಲೆಮಾರಿ ಸ್ಥಳಗಳಲ್ಲಿ ಭೇಟಿ ನೀಡಿ ಯುವಜನರು ಸ್ಥಳೀಯ ಸಾಂಸ್ಕೃತಿಕ ಬಹುತ್ವ ಹಾಗೂ ಶ್ರಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ತಳ ಸಮುದಾಯದ ಜೀವನ ಕ್ರಮ ಸಾಂಸ್ಕೃತಿಕ ಆಚರಣೆ ಆಹಾರ ಪದ್ದತಿ ಸಾಮರಸ್ಯ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯ ಆಗಿರುವ ಸುಧಾರಣೆಗಳು ಅರ್ಥ ಮಾಡಿಕೊಳ್ಳಲು ಯುವಜನರು ಸಕ್ರಿಯವಾಗಿ ಸಂವಾದ ಕಾರ್ಯಗಾರದಲ್ಲಿ ಯುವರಾಜ್ ಮಾತನಾಡಿ ಮಾಹಿತಿ ನೀಡಿದರು.

ಈ ಕಾರ್ಯಾಗಾರದಲ್ಲಿ ಶ್ರೀ ಗುರುತಿರುದ್ರಸ್ವಾಮಿ ದೇವಸ್ಥಾನದ ಅರ್ಚಕರಾದ ಕೆ.ಟಿ. ರುದ್ರಮುನಿ, ಮರಿಪಾಲಯ್ಯ, ಶಿವದತ್ತ, ಸತ್ಯಪ್ಪ, ರಾಮಣ್ಣ, ನೇತ್ರಸೂರ್ಯ, ಜಿ.ಕೆ. ಮಂಜುನಾಥ್, ಮಾನಸ, ವೈಭವ, ನವೀನ, ಶಶಿಕುಮಾರ್,
ಇದ್ದರು

About The Author

Namma Challakere Local News
error: Content is protected !!