ಚಳ್ಳಕೆರೆ : ಕೃಷ್ಣ ಜನ್ಮಾಷ್ಟಮಿಯು ಪ್ರಪಂಚದಾದ್ಯಂತ ಹಿಂದೂಗಳಿಗೆ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ, ಮತ್ತು ಇದನ್ನು ಅವರ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳ ಆಧಾರದ ಮೇಲೆ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಅಂಗವಾಗಿ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ನಂತರ ಸಭೆಯಲ್ಲಿ ಮಾತನಾಡಿದರು. ಜನ್ಮಾಷ್ಟಮಿಯನ್ನು ಉಪವಾಸ ಮಾಡುವುದು, ಹಾಡುವುದು, ಒಟ್ಟಿಗೆ ಪ್ರಾರ್ಥಿಸುವುದು, ವಿಶೇಷ ಆಹಾರವನ್ನು ತಯಾರಿಸುವುದು ಮತ್ತು ಹಂಚಿಕೊಳ್ಳುವುದು, ರಾತ್ರಿ ಜಾಗರಣೆ ಮತ್ತು ಕೃಷ್ಣ ಅಥವಾ ವಿಷ್ಣು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸುತ್ತಾರೆ. ಮಥುರಾ ಮತ್ತು ವೃಂದಾವನ ಸ್ಥಳಗಳಿಗೆ ಯಾತ್ರಿಕರು ಭೇಟಿ ನೀಡುತ್ತಾರೆ ಎಂದರು.
ಸಮುದಾಯದ ಹಿರಿಯ ಮುಖಂಡರಾದ ನಿವೃತ್ತ ಶಿಕ್ಷಕ ಮಂಜುನಾಥ್ ಮಾತನಾಡಿ, ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂ ಮತ್ತು ರಾಜಸ್ಥಾನ ಮತ್ತು ಗುಜರಾತ್ನ ಭಾಗಗಳಲ್ಲಿ. ಇದನ್ನು ಹಲವಾರು ಹವ್ಯಾಸಿ ಕಲಾವಿದರ ತಂಡಗಳು ಅಭಿನಯಿಸುತ್ತವೆ, ಅವರ ಸ್ಥಳೀಯ ಸಮುದಾಯಗಳಿಂದ ಹುರಿದುಂಬಿಸಲಾಗುತ್ತದೆ ಮತ್ತು ಈ ನಾಟಕ-ನೃತ್ಯ ನಾಟಕಗಳು ಪ್ರತಿ ಜನ್ಮಾಷ್ಟಮಿಯ ಕೆಲವು ದಿನಗಳ ಮೊದಲು ಪ್ರಾರಂಭವಾಗುತ್ತವೆ. ಜನರು ತಮ್ಮ ಮನೆಗಳನ್ನು ಹೂವುಗಳು ಮತ್ತು ಬೆಳಕಿನಿಂದ ಅಲಂಕರಿಸುತ್ತಾರೆ. ಈ ದಿನ ಜನರು “ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ- ಕೃಷ್ಣ ಹರೇ ಹರೇ” ಎಂದು ಜಪಿಸುತ್ತಾರೆ ಎಂದರು.
ಇದೇ ಸಂಧರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಸಮುದಾಯದ ಮುಖಂಡ ಹಟ್ಟಿ ರುದ್ರಪ್ಪ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಶಿಲ್ಪ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ,
ಸದಸ್ಯ ರಮೇಶ್ ಗೌಡ, ಕೆ.ವೀರಭದ್ರಪ್ಪ, ಚಳ್ಳಕೆರಪ್ಪ, ಕವಿತಾ, ಪರುಶುರಾಂಪರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರವಿಕುಮಾರ್, ಹಟ್ಟಿ ರುದ್ರಪ್ಪ,
ತಹಶಿಲ್ದಾರ್ ರೇಹಾನ್ ಪಾಷ, ಡಿವೈಸ್ ಪಿ ಬಿಟಿ.ರಾಜಣ್ಣ, ಪೌರಾಯುಕ್ತ ಜಗರೆಡ್ಡಿ, ಸಮುದಾಯದ ಮಹಿಳೆಯರು, ಸಾರ್ವಜನಿಕರು, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


