ಬಾರಿ ಮಳೆಗೆ ಮೆಕ್ಕೆಜೋಳ ಬೆಳೆಗೆ ಹಾನಿ…
ಚಳ್ಳಕೆರೆ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಫಸಲಿಗೆ ಬಂದಿದ್ದ ಮೆಕ್ಕೆಜೋಳ ಬೆಳಗ್ಗೆ ಹಾನಿಯಾಗಿದೆ.
ಎರಡು ಗಂಟೆಗಳ ಕಾಲ ಬಾರಿ ಮಳೆ ಸುರಿದ್ದಿದ್ದು ಹುಲಿ ಕುಂಟೆ ರೈತ ದಯಾನಂದ ಎನ್ನುವವರಿಗೆ ಸೇರಿದ್ದ ಬೆಳಗೆರೆ ಕಾವಲಿಯಲ್ಲಿರುವ ಎರಡುವರೆ ಎಕರೆ ನೀರಾವರಿ ಜಮೀನಿನಲ್ಲಿ ಬೆಳೆಯಲಾಗಿದ್ದ ಫಸಲಿಗೆ ಬಂದಿದ್ದ ಮೆಕ್ಕೆಜೋಳ ಬೆಳಗ್ಗೆ ಹಾನಿಯಾಗಿದೆ.
ರೈತರಾದ ದಯಾನಂದ ಕೊಳವೆ ಬಾವಿ ನೀರನ್ನು ಹನಿ ತುಂತುರು ನೀರಾವರಿ ಸೌಲಭ್ಯದ ಮೂಲಕ ಎರಡುವರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಈಗ ಮೆಕ್ಕೆಜೋಳ ಕಟಾವಿಗೆ ಬಂದಿದ್ದು ಸುರಿದ ಭಾರಿ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದ್ದು ಇದರಿಂದ ರೈತ ದಯಾನಂದ ನಿಗೆ ನಷ್ಟವಾಗಿದೆ…

