ಚಳ್ಳಕೆರೆ : ಶ್ರಾವಣ ಮಾಸದಲ್ಲಿ ದೇವರ ಪೂಜೆಗಳು ವಿಶಿಷ್ಟ ಶೈಲಿಯಲ್ಲಿ ಧಾರ್ಮಿಕ ಪದ್ದತಿಗಳಲ್ಲಿ ಜರುಗುತ್ತಿವೆ ಎಂಬುವುದಕ್ಕೆ ಚಳ್ಳಕೆರೆ ನಗರದ ಹೃದಯ ಭಾಗದ ಹಳೆನಗರದ ತಿಮ್ಮಪ್ಪ ಸ್ವಾಮಿಯೇ ಸಾಕ್ಚಿಕರಿಸುತ್ತಾರೆ
ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಭಕ್ತರು ಶ್ರಾಧ್ಧ ಭಕ್ತಿಯಿಂದ ಶ್ರಾವಣ ಮಾಸದ ಎರಡನೇ ಶನುವಾರ ತಿಮ್ಮಪ್ಪ ಸನ್ನಿಧಿಯಲ್ಲಿ ಭಕ್ತರು ವಿಶೇಷವಾಗಿ ಪೂಜೆ ಮಾಡಿಸುವ ಮೂಲಕ ದೇವರ ಮೊರೆಹೋಗಿದ್ದಾರೆ.
ಅದರಂತೆ ಹಳೆನಗರದ ಭಕ್ತರು, ಯಜಮಾನರು ಹಾಗೂ ಮಹಿಳೆಯರು ಸೇರಿ ಮಹಿಳೆಯರು ಒಂದೇ ತರಹದ ಸೀರೆಯಲ್ಲಿ ತಮ್ಮ ಭಕ್ತಿ ಸಮರ್ಪಿಸಿದರೆ, ಯಜಮಾನರು ಪಂಚೆಶಾಲು ಹಾಕುವ ಮೂಲಕ ವಿಶೇಷವಾದ ಉಡುಪಿನಲ್ಲಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಅದರಂತೆ ಹಳೆನಗರದ ತಿಮ್ಮಪ್ಪ, ಅಜ್ಜಣ್ಣ, ನಾಗರಾಜ್, ಪಾಪಣ್ಣ, ಚಳ್ಳಕೆರಪ್ಪ, ಜಯಣ್ಣ, ವೀರಭದ್ರಪ್ಪ , ಅನ್ನಪೂರ್ಣ, ಪದ್ಮಾವತಿ, ಮಂಜಮ್ಮ, ಮಂಜುಳಾ, ಶೃತಿ, ಇತರರ ಭಕ್ತರು ಪಾಲ್ಗೊಂಡಿದ್ದರು.

