ಚಳ್ಳಕೆರೆ :
ಚಳ್ಳಕೆರೆ: ಸರ್ಕಾರ ಗೊಬ್ಬರ ಕೊಡುವಲ್ಲಿ ವಿಫಲವಾಗಿದೆ
ಸರ್ಕಾರ ರೈತರಿಗೆ ಗೊಬ್ಬರವನ್ನು ನೀಡುವಲ್ಲಿ ಮುಂದಾಗಿ, ಮನೆ
ಬಾಗಿಲಿಗೆ ಕೊಡುವ ವ್ಯವಸ್ಥೆಯನ್ನು ಮಾಡಬೇಕಿತ್ತು. ಆದರೆ
ಸರ್ಕಾರ ರೈತರಿಗೆ ಯೂರಿಯಾ ಗೊಬ್ಬರ ನೀಡುವಲ್ಲಿ ವಿಫಲವಾಗಿದೆ
ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆಟಿ ಕುಮಾರಸ್ವಾಮಿ
ಹೇಳಿದರು. ಚಳ್ಳಕೆರೆಯಲ್ಲಿಂದು ಮಾತನಾಡಿ, ರೈತರು ಗೊಬ್ಬರಕ್ಕಾಗಿ
ಗೋಗರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಾದರೂ ಗೊಬ್ಬರವನ್ನು
ರೈತರಿಗೆ ಕೊಡುವಂತಾಗಬೇಕು. ಈ ಕಾಂಗ್ರೆಸ್ ಧೋರಣೆಯನ್ನು
ನಾವು ವಿರೋಧಿಸುತ್ತೇವೆಂದರು.

