ನಾಯಕನಹಟ್ಟಿ:- ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರಥಮ ದರ್ಜೆ ಗುತ್ತಿಗೆದಾರರಾದ ಗುಂಡು ಮುಣುಗು ಎಸ್ ಪಿ ಪ್ರಕಾಶ್ ಕುಟುಂಬಸ್ಥರಿಂದ ಅನ್ನಸಂತರ್ಪಣೆ ಮಾಡಲಾಯಿತು.
ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷ ಮೊದಲ ಶ್ರಾವಣ ಮಾಸದ ಸೋಮವಾರ ಪ್ರಥಮ ದರ್ಜೆ ಗುತ್ತಿಗೆದಾರರಾದ ಗುಂಡು ಮುಣುಗು ಎಸ್ ಪಿ ಪ್ರಕಾಶ್ ರತ್ನಮ್ಮ, ಕುಟುಂಬಸ್ಥರಿಂದ ಅನ್ನ ಸಂತರ್ಪಣೆ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕುಟುಂಬಸ್ಥರಾದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಮ್ಮ ಪ್ರಕಾಶ್, ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ. ಪ್ರದೀಪ್, ಡಾ. ಐಶ್ವರ್ಯ, ಗಗನ್ ದೀಪ್, ಸುಮಾ, ಗುತ್ತಿಗೆದಾರ ಆಕಾಶ್, ಹಂಸವೇಣಿ, ಮಕ್ಕಳಾದ ಸಮರ್ಥ್ ಸಾನ್ವಿ ರಾಘವೇಂದ್ರ ದೇವಸ್ಥಾನದ ಸಿಬ್ಬಂದಿ ಸತೀಶ್, ಪ್ರಕಾಶ್, ಶಂಕರ್, ಮಹದೇವ, ರುದ್ರೇಶ್ ತಿಪ್ಪೇಸ್ವಾಮಿ, ಸೇರಿದಂತೆ ಭಕ್ತರು ಇದ್ದರು.

