ಚಿತ್ರದುರ್ಗ::
ಚಿತ್ರದುರ್ಗದ ಯುವಕರು ಅಕ್ರಮಣಕಾರಿ ಪ್ರವೃತ್ತಿ ಉಳ್ಳವರು ಎಂದು ಚಳ್ಳಕೆರೆ ನಿಕಟ ಪೂರ್ವ ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು
ಅವರು ನಗರದ ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಕಬ್ಬಡಿ ಪಂದ್ಯಾವಳಿಗೆ ಯುವಕರ ದೇಹ ಸೌ ಷ್ಟವ ಅತಿ ಮುಖ್ಯ ಚಿತ್ರದುರ್ಗದ ಯುವಕರಲ್ಲಿ ಈ ದೇಹ ಸೌಸ್ಟವ ಅಗಾಧವಾಗಿದ್ದು ಚಿತ್ರದುರ್ಗದ ಪರಂಪರೆ ಇರುವಂತೆ ಈ ಆಟೋ ಅಷ್ಟೇ ಮುಖ್ಯ ಪ್ರೇಕ್ಷಕರ ಉಸಿರನ್ನು ನಿಲ್ಲಿಸುವಂತಹ ಸಾಮರ್ಥ್ಯಈ ಆಟ ಕ್ಕಿದೆ ಮನುಷ್ಯನ ದೇಹದಲ್ಲಿ ಇರುವಂತ ಸ್ನಾಯು ಮತ್ತು ಕೀಲು ಹಾಗೂ ಉಸಿರಾಟ ಮತ್ತು ಜೀರ್ಣ ಕ್ರಿಯೆಗೆ ಈ ಆಟ ತುಂಬಾ ಸಹಕಾರಿ ಈ ಆಟದಲ್ಲಿ ಭಾಗವಹಿಸುವಂತ ಪ್ರತಿಯೊಬ್ಬ ಯುವಕರು ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಈ ದುರ್ಗಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು.
ಇದೆ ವೇಳೆ ಕಾರ್ಯಕ್ರಮದಲ್ಲಿ ಸರ್ಕಾರಿ ಮುಖ್ಯ ಅಭಿಯೋಜಕರಾದಂತ ಮಲ್ಲಯ್ಯ ನಗರ ಸಭೆ ಉಪಾಧ್ಯಕ್ಷರಾದಂತ ಶ್ರೀದೇವಿ ಮಾತನಾಡಿದರು ಕಾರ್ಯಕ್ರಮದಲ್ಲಿ ಯುವ ವಕೀಲ ವಿಜಿ ಲಕ್ಷ್ಮಿಕಾಂತ್, ರವೀಂದ್ರ ಕುಮಾರ್ ಪ್ರತಾಪ್ ಜೋಗಿ ತೇಜಸ್ವಿ ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು

