ಪವಾಡ ಪುರುಷ ಎತ್ತಪ್ಪ ಜಾತ್ರೆ ಮಹೋತ್ಸವದ ಪೂರ್ವಭಾವಿ ಸಭೆ…
ಚಳ್ಳಕೆರೆ:
ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಬೆಂಗಳೂರು,
ಚಳ್ಳಕೆರೆ ತಾಲ್ಲೂಕು ಕಾಡು ಗೊಲ್ಲರ ಸಂಘ ರಾಜ್ಯ 42 ತಾಲ್ಲೂಕಿನ ಕಾಡುಗೊಲ್ಲರ ಸಂಘ ಹಾಗೂ ವಿವಿಧ ಕಾಡುಗೊಲ್ಲರ ಸಂಘಟನೆಯ ವತಿಯಿಂದ ದಿನಾಂಕ ಜೂ.14 /07/2025 ರ ಸೋಮುವಾರ ದಂದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಪವಾಡ ಪುರುಷ ಯತ್ತಪ್ಪನ ಬೆಟ್ಟದಲ್ಲಿ “ಯತ್ತಪ್ಪ ಜಾತ್ರೆ ”ಹಮ್ಮಿಕೊಂಡಿದ್ದು ಈ ಜಾತ್ರೆಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷರಾದ ರಾಜಣ್ಣ, ಸೇರಿದಂತೆ ವಿವಿಧ ಕಾಡುಗೊಲ್ಲರ ಅಧಿಕಾರಿಗಳು ಹಾಗೂ ಮುಖಂಡರು ಆಗಮಿಸಲಿದ್ದು ಕಾಡುಗೊಲ್ಲರ ಸಮುದಾಯದ ಮುಖಂಡರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಜಾತ್ರೆಗೆ ಬರುವ ನಿರೀಕ್ಷೆ ಇದ್ದು ಈ ಕುರಿತಂತೆ ಇಂದು ಚಳ್ಳಕೆರೆ ನಗರದ ಗೊಲ್ಲರ ಹಾಸ್ಟೆಲ್ ನಲ್ಲಿ ಕಾಡುಗೊಲ್ಲರ ಸಂಘದ ತಾಲೂಕು ಅಧ್ಯಕ್ಷರಾದ ಬುದಿಹಳ್ಳಿ ರಾಜಣ್ಣ ಇವರ ಅಧ್ಯಕ್ಷತೆಯಲ್ಲಿ ಯತ್ತಪ್ಪನ ಜಾತ್ರೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು..
ಈ ಪೂರ್ವಭಾವಿ ಸಭೆಯಲ್ಲಿ
ಕಾಡುಗೊಲ್ಲರ ಸಂಘದ ಪ್ರದಾನ ಕಾರ್ಯದರ್ಶಿ ಮಿರಸಾಭಿಹಳ್ಳಿ ಸುರೇಶ, ಖಜಾಂಚಿ ಹುಲಿಕುಂಟೆ ಕಾಂತರಾಜ್. ಕಾಡುಗೊಲ್ಲರ ಸಂಘದ ನಿರ್ದೇಶಕರಾದ
ತಿಪ್ಪೇಸ್ವಾಮಿ (ಜೋಗಿ) ಕೃಷ್ಣಾ ಮೂರ್ತಿ ,,ಶಿವರಾಜ್ ಕುಮಾರ್ ,ಉಮೇಶ ವಿರೇಶ ಸಂಘಟನ ಕಾರ್ಯದರ್ಶಿ ಮಹಾಲಿಂಗಪ್ಪ ಕಾಡುಗೊಲ್ಲರನೌಕರ ಸಂಘದ ಅಧ್ಯಕ್ಷರಾದ ಶ್ರೀಕಾಂತ ,ವೆಂಕಟೇಶ, ಕಾರ್ಯದರ್ಶಿ ನಾಗರಾಜ್ ಪೊ.ಎಸ್.ಮಂಜುನಾಥ, ವಿರಭದ್ರಪ್ಪ, ಬಂಜಗೆರೆ ಈರಣ್ಣ, ಸೇರಿದಂತೆ ಕಾಡುಗೊಲ್ಲರ ಸಂಘದ ಪಾದಾಧಿಕಾರಿಗಳು,ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು…..

