ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ದೇವರ ಗುಡಿ ನಿರ್ಮಿಸುವುದಕ್ಕಿಂತ ಗ್ರಂಥಾಲಯ ನಿರ್ಮಿಸಿದ್ದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ ಆದ್ದರಿಂದ ಉತ್ತಮ ಗ್ರಂಥಾಲಯ ಮನುಷ್ಯ ಜ್ಞಾನ ವಿಕಾಸಕ್ಕೆ ಬುನಾದಿ ಎಂದು ಗ್ರಂಥಾಲಯದ ಸಲಹಾ ಸಮಿತಿ ಸದಸ್ಯರು ಹಾಗೂ ಪತ್ರಕರ್ತರಾದ ಜಾಲಿಮಂಜು ಹೇಳಿದರು.
ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ತರಬೇತಿಯಯೋಜಕರಾದ ಲಕ್ಷ್ಮೀದೇವಿ , ಗ್ರಂಥಪಾಲಕರು ಜಿ ನಾಗರಾಜ್, ಶಿಕ್ಷಕರು ರವೀಂದ್ರ ಹೊಸ ಮನೆ , ಮಹಿಳಾ ಸ್ವಸಾಯ ಸಂಘದ ರಾಧಿಕಾ, ಸಂಧ್ಯಾ ರೇಖಾ, ದೇವರಾಜ್, ಅಂಗನವಾಡಿ ಕಾರ್ಯಕರ್ತೆ ಹನುಮಕ್ಕ, ಯಶೋದಮ್ಮ , ಷಣ್ಮುಖ ಹೊಟ್ಟೆಪ್ಪನಹಳ್ಳಿ ,ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

