ಚಳ್ಳಕೆರೆ :
ರಾಜ್ಯ ಸಮಿತಿ ಕಾರ್ಯಾಗಾರ ಶಿರಸಿ ಸಭೆಯಲ್ಲಿ, ರಾಜ್ಯದಲ್ಲಿ ಕೃಷಿಕರಿಗೆ ಅನ್ಯಾಯ ಆಗುತ್ತಿರುವುದನ್ನು ಕಣ್ಣಿಂದ ನೋಡಲಾರದೆ.
ಕೋಡಿಹಳ್ಳಿ ಚಂದ್ರಶೇಖರ ಅವರು. ಮಾನ್ಯ ರಾಜ್ಯ ಸಿಎಂ ಅವರ ಗಮನಕ್ಕೆ ತಂದರು ಕೂಡ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಜೊತೆಗೆ ರೈತರಿಗೆ ಮುಂಗಾರು ಹಂಗಾಮಿ ರೈತರಿಗೆ ಬೀಜ ಮತ್ತು ರಾಸಾಗೊಬ್ಬರ ಇನ್ನಿತರ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಡಾಕ್ಟರ್ ಎಂ ಎಸ್ ಸ್ವಾಮಿನಾಥನ ವರದಿ ಜಾರಿಯಾಗುವಂತೆ ಚರ್ಚಿಸಲಾಯಿ.
ಸತತವಾಗಿ ನಾಲ್ಕು ವರ್ಷ ಕೃಷಿಯಲ್ಲಿ ರೈತರಿಗೆ ನಷ್ಟವಾದ ಕಾರಣದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ರೈತರ ಸಾಲ ಮನ್ನಾ ಮಾಡುವಂತೆ ಚರ್ಚಿಸಲಾಯಿತ, ಶ್ರೀ.ಎಸ್ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಅವಧಿಯಲ್ಲಿ ರೈತರಿಗೆ ಕೃಷಿ ಮಾಡಲು ಉಚಿತ ಐಪಿ ಸೆಕ್ಷನ್ ವಿದ್ಯುತ್ ನೀಡಿದ್ದು, ಇಂದಿನ ರಾಜ್ಯ ಸರ್ಕಾರ ಏಕಾಏಕಿ ಸೆಕ್ಷನ್ ಆರ್ ಆರ್ ನಂಬರ್ ನೀಡಲು ಮುಂದಾಗಿದೆ. ಅದನ್ನು ಕುಡ್ಲೆ ಹಿಂಪಡೆಯಬೇಕು.
ಇನ್ನು ಅನೇಕ ರೈತರಿಗೆ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿದರು.

