“ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀದೇವಿಸ್ತುತಿ ಪಾರಾಯಣ”. ಚಳ್ಳಕೆರೆ-ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಸತ್ಸಂಗದ ಪ್ರಯುಕ್ತ ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಶ್ರೀಮತಿ ಜಿ ಯಶೋಧಾ ಪ್ರಕಾಶ್ ನಡೆಸಿಕೊಟ್ಟರು‌. ಈ ಸಂದರ್ಭದಲ್ಲಿ ಚಳ್ಳಕೆರೆಯ ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕರಾದ ಶ್ರೀಮತಿ ಮಂಜುಳಮ್ಮ ಅವರನ್ನು ಸತ್ಸಂಗ ಕೇಂದ್ರದ ಸದ್ಭಕ್ತರ ವತಿಯಿಂದ ಸನ್ಮಾನಿಸಿ-ಗೌರವಿಸಲಾಯಿತು. ‌ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಶಾಂತಮ್ಮ ಶಾಂತವೀರಪ್ಪ, ನಾಗರತ್ನಮ್ಮ,ಪ್ರತಿಭಾ,ಲೀನಾ,ಆದ್ಯ,ಶಿವನಿ, ವಿನುತ,ತನೋಜ್,‌ ಸುಜಾತ,ಶಾರದಾಮ್ಮ, ವಿನೋದಮ್ಮ, ಯತೀಶ್ ಎಂ ಸಿದ್ದಾಪುರ,ಶೈಲಜ ಶ್ರೀನಿವಾಸ್, ರಶ್ಮಿ ವಸಂತ,ದ್ರಾಕ್ಷಾಯಣಿ ವಿಜಯೇಂದ್ರ, ವೀರಮ್ಮ ಬಸವರಾಜ, ಜಯಶೀಲಮ್ಮ, ವಿಜಯಲಕ್ಷ್ಮಿ, ಜಯಮ್ಮ,ನಿಖಿಲೇಶ್ ಯಾದವ್ ಇದ್ದರು.

About The Author

Namma Challakere Local News
error: Content is protected !!