ಚಳ್ಳಕೆರೆ : ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಸುಖ ಶಾಂತಿ ನೆಲೆಗಾಗಿ ಆದಿಶಕ್ತಿ ದೇವರುಗಳನ್ನು ಪೂಜಿಸುವುದು ವಾಡಿಕೆ, ಆದರಂತೆ ಇಂದು ಗ್ರಾಮದ ಈಶ್ವರ ದೇವರ ಪುನರ್ ಪ್ರಾಣ ಪ್ರಾತಿಷ್ಠನ ಮಾಡಿರುವುದು ಸಮೃದ್ಧಿಯ ಸಂಕೇತವಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಶ್ರೀ ಈಶ್ವರ ದೇವಸ್ಥಾನ ಉದ್ಘಾಟನೆ, ಪುನರ್ ಪ್ರಾಣ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ, ನೂತನ ಕರಿಗಲ್ಲು ಸ್ಥಾಪನೆ, ಅಡ್ಡ ಪಲ್ಲಕ್ಕಿ ಮಹೋತ್ಸವ, ಜನಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಶ್ರೀ ಪೀಠ ಉಜ್ಜಯಿನಿಯಿಂದ ಶ್ರೀಮದ್ ಉಜ್ಜಾಯಿನಿ ಸದ್ಧರ್ಮ ಸಿಂಹಾಸನಾದೀಶ್ವರ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವದ್ಪಾತ್ ಮಹಾಸ್ವಾಮಿಗಳು ಭಾಗವಹಿಸಿದ್ದರು.
ಇದೇ ಸಂಧರ್ಭದಲ್ಲಿ
ಪೂರ್ಣ ಕುಂಭ, ಕಳಸ ಕನ್ನಡಿ ಮೆರವಣಿಗೆ, ಸಕಲ ಪರಿವಾರ ದೇವತಾ ಹೋಮಗಳು, ನೂತನ ಕಾರ್ಯಕ್ರಮ ಜನಜಾಗೃತಿ ಧರ್ಮ ಸಮಾರಂಭ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ನೆರೆವೆರಿಸಲಾಯಿತು.