ಚಳ್ಳಕೆರೆ :
ಚಿತ್ರದುರ್ಗ: ಕೊಳಗೇರಿ ಬೋರ್ಡ್ ಅಧಿಕಾರಿ ವಿರುದ್ಧ
ಕಿಡಿ ಕಾರಿದ ಸಂಸದರು
ಚಿತ್ರದುರ್ಗದ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ,
ಸಮಸ್ಯೆ ಏನಾಗಿದೆ, ಕೆಲವರಿಗೆ ಕೊಟ್ಟು ಇನ್ನು ಕೆಲವರಿಗೆ ಕೊಟ್ಟಿಲ್ಲ
ಯಾಕೆ, ಇನ್ನು ಒಂದು ವಾರದಲ್ಲಿ ಹಕ್ಕು ಪತ್ರ ನೀಡಬೇಕು,
ನಾನು ಆ ಕಾರ್ಯಕ್ರಮಕ್ಕೆ ಬರುತ್ತೇನೆಂದು ಸಂಸದ ಕಾರಜೋಳ
ಕೊಳಗೇರಿ ಅಧಿಕಾರಿ ವಿರುದ್ಧ ಕಿಡಿ ಕಾರಿದರು.
ಚಿತ್ರದುರ್ಗದ ಜಿಪಂ
ಸಭಾಂಗಣದಲ್ಲಿಂದು ನಡೆದ ದಿಶಾ ಸಭೆಯಲ್ಲಿ ಮಾತಾಡಿ, ನನ್ನ
ಮತ್ತು ಶಾಸಕರ ಮೇಲೆ ದೂರಬೇಡಿ, ಡಿಸಿ ಅವರನ್ನು ಭೇಟಿ ಮಾಡಿ,
ದಿನ ನಿಗಧಿ ಮಾಡಿ ಹಕ್ಕು ಪತ್ರ ಕೊಡಬೇಕೆಂದರು.

