ಚಳ್ಳಕೆರೆ :
ಚಿತ್ರದುರ್ಗ: ಪಾದಾಚಾರಿ ರಸ್ತೆ ಮಾಡಿಕೊಡಿ
ಚಿತ್ರದುರ್ದದ ದಾವಣಗೆರೆ, ಮೆದೇಹಳ್ಳಿ ರಸ್ತೆಗಳನ್ನು
ಅಗಲೀಕರಣ ಮಾಡಿ ಪಾದಚಾರಿ ರಸ್ತೆ ಮಾಡುವಂತೆ ಆಗ್ರಹಿಸಿ,
ಜಯ ಕರ್ನಾಟಕ ಜನಪರ ವೇದಿಕೆಯಿಂದು ಜಿಲ್ಲಾಧಿಕಾರಿಗೆ
ಮನವಿ ಸಲ್ಲಿಸಿತು. ಚಿತ್ರದುರ್ಗದ ಚಳ್ಳಕೆರೆ ರಸ್ತೆಯಿಂದ ಕನಕ
ಸರ್ಕಲ್ ವರೆಗೆ ರಸ್ತೆ ಆಗಲೀಕರಣ ಕಾಮಗಾರಿ ಮಂಜೂರು
ಮಾಡಿದೆ. ಜೆ. ಎಂ. ಐ. ಟಿ ಕಾಲೇಜಿನಿಂದ ಚಳ್ಳಕೆರೆ ಗೇಟ್ ಕಡೆಗೆ
ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ಮಾರ್ಗದಲ್ಲಿ ವಾಹನಗಳು
ಹೆಚ್ಚು ಓಡಾಡುತ್ತಿದ್ದು, ಪಾದಚಾರಿ ರಸ್ತೆ ಮಾಡುವಂತೆ ಮನವಿ
ಸಲ್ಲಿಸಿದರು.

