ಚಳ್ಳಕೆರೆ : ಪ್ರಸ್ತುತ 2023 ರ ಚುನಾವಣೆಯಲ್ಲಿ ಈಡೀ ಜಿಲ್ಲೆಯಲ್ಲಿ ಎರಡರಿಂದ ಮೂರು ಕ್ಷೇತ್ರಗಳಲ್ಲಿ ಖಾತೆ ತೆರೆಯುತ್ತೆವೆ ಎಂದು ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ಭವಿಷ್ಯ ನುಡಿದಿದ್ದಾರೆ.

ಚಳ್ಳಕೆರೆ ನಗರದ ಮನೆಯೊಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಚುನಾವಣೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ

ಇದರಂತೆ ಚಳ್ಳಕೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಹಿನಡೆಯಾಗಿರುವುದರಿಂದ ಈ ಬಾರಿ ಅಧಿಕಾರಕ್ಕೆ ಬರುವುದು ಶತ ಸಿದ್ದ

ಅದರಂತೆ ಹಿರಿಯೂರು ಹಾಗೂ ಚಿತ್ರದುರ್ಗ ಕ್ಷೇತ್ರದಲ್ಲಿ ಪಕ್ಷದ ವರಿಷ್ಠರ ತೀರ್ಮಾನದಂತೆ ಕ್ಷೇತ್ರದಲ್ಲಿ ಇರುವೆ, ಎರಡು ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇದೆ.

ನಮ್ಮ ಪಕ್ಷದ ವರಿಷ್ಠರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಚಳ್ಳಕೆರೆ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿ ಭದ್ರಾ ನೀರಿನಿಂದ ಹಿಡಿದು ವೇದಾವತಿ ನದಿಗೆ ನೀರು ಬಿಡುವ ವಿಚಾರದಲ್ಲಿ ಕೂಡ ಚಳ್ಳಕೆರೆ ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದಾರೆ ಎಂದರು

ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್, ಹಾಗೂ ಬಿಜೆಪಿ ಎರಡು ಪಕ್ಷಗಳನ್ನು ಕಟ್ಟಿ ಹಾಕುವ ಕೆಲಸವಾಗುತ್ತದೆ, ಅವರು ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವಧಿಯಲ್ಲಿ ಕೆಲವು ವೇದಾವತಿ ಬ್ಯಾರೆಜ್ ಗಳನ್ನು ನಾವೇ ಮಾಡಿಸಿದ್ದು ಎಂದು ಕೆಲವರು ಹೇಳಿ ಮತ ಗಿಟ್ಟಿಸಿಕೊಳ್ಳುತ್ತಾರೆ ಆದರೆ ಕ್ಷೇತ್ರದ ಜನಕ್ಕೆ ಗೊತ್ತಿದೆ ಯಾರ ಅವಧಿಯಲ್ಲಿ ಆಗಿದೆ ಎಂಬುದನ್ನು

ನಿಚ್ಚಳವಾಗಿ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರಕ್ಜೆ ಬರುವುದು ಸಿದ್ದ ನಮ್ಮ ನೇರ ಪ್ರತಿಸ್ಪರ್ಧಿ ಕಾಂಗ್ರೆಸ್ , ಈಗಾಗಲೇ ಬಿಜೆಪಿಯ ಮುಖಂಡರು ಕೂಡ ನಮ್ಮ ಒಡನಾಟದೊಂದಿಗೆ ಕಾಂಗ್ರೆಸ್ ಮಣಿಸಲು ಸಕಲ ತಯಾರಿ ಕೂಡ ಮಾಡಿಕೊಂಡಿದ್ದೆವೆ,

ರೈತರ ಹಿತ ದೃಷ್ಟಿಯಿಂದ ಸಾಲ ಮನ್ನಾ ಹಾಗಿರಬಹುದು, ಬೆಳೆ ಪರಿಹಾರ ಹಾಗಿರಬಹುದು ಈಗೇ ಚಳ್ಳಕೆರೆ ತಾಲ್ಲೂಕಿನಲ್ಲಿ ಸುಮಾರು150 ಕೋಟಿ ರೂಪಾಯಿ ರೈತರಿಗೆ ಸಾಲ ಮನ್ನಾ ರೂಪದಲ್ಲಿ ವರದಾನವಾಗಿದೆ, ಕ್ಷೇತ್ರದ ಜನರ ಹಿತ ದೃಷ್ಟಿಯಿಂದ 5 ಕೋಟಿ ರೂ..ವೆಚ್ಚದಲ್ಲಿ ಲೋಕೋಪಯೋಗಿ ಇಲಾಕೆಗೆ ಪಕ್ಷದ ಸಚಿವರು ಹಾಕಿದ್ದರು ಈಗೇ ಕ್ಷೇತ್ರದ ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಜೆಡಿಎಸ್ ಮುಖಂಡರು ಕೆಲಸ ಮಾಡುತ್ತಿದ್ದಾರೆ
ಎಂದರು.

ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಮಾತನಾಡಿ, ಕಳೆದ ಬಾರಿ ಜನರು ವಿಶ್ವಾಸ ತೋರಿಸಿದಂತೆ ಈ ಬಾರಿಯು ಕೂಡ ವಿಶ್ವಾಸ ತೋರಿಸುವ ಅಚಲವಾದ ನಂಬಿಕೆಯಿದೆ, ಆದರಂತೆ ಈಗಾಗಲೇ ಪಕ್ಷದ ಸಂಘಟನೆಗೆ ಪೂರ್ವ ಸಿದ್ದತೆ ನಡೆಸಿದ್ದೆವೆ ಅದರಂತೆ ಆಡಳಿತ ಪಕ್ಷ ಬಿಜೆಪಿಯ ರೈತ ವಿರೋಧಿ ಕಾಯ್ದೆಗಳಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಜನರು ರೋಸಿ ಹೊಗಿದ್ದಾರೆ

ನಮ್ಮ ಪಕ್ಷದ ತತ್ವ ಸಿದ್ದಾಂತಗಳ ಮೆಚ್ಚಿ ಕಾಂಗ್ರೆಸ್ ನಿಂದ ಹಾಗೂ ಬಿಜೆಪಿಯಿಂದ ಮುಖಂಡರು ಕಾರ್ಯಕರ್ತರು ನಿತ್ಯವೂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಅದರಂತೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಧ್ಯಕರ್ನಾಟಕ ಭಾಗದಲ್ಲಿ ರಾಜ್ಯಸಭಾ,( ಎಂಎಲ್ ಸಿ) ಸದಸ್ಯರನ್ನು ಈ ಭಾಗದಲ್ಲಿ ಮಾಡಬೇಕು ಎನ್ನುವ ಪ್ರಸ್ತಾಪವನ್ನು ಕೂಡ ವರಿಷ್ಠರೊಂದಿಗೆ ಚರ್ಚಿಸಲಾಗಿದೆ,

ಇಂದು ಶ್ರೀ ವೀರಭದ್ರಸ್ವಾಮಿ ರಥೋತ್ಸವಕ್ಕೆ ಆಗಮಿಸಬೇಕಾಗಿದ್ದ ರಾಜ್ಯದ ಜೆಡಿಎಸ್ ಪಕ್ಷದ ಯುವ ರಾಜ್ಯಾದ್ಯಾಕ್ಷ ನಿಖಿಲ್ ಕುಮಾರಸ್ವಾಮಿ, ಅನ್ಯ ಕಾರ್ಯಗಳ‌ ನಿಮಿತ್ತ ಬರಲು ಸಾಧ್ಯವಾಗಿಲ್ಲ, ಮುಂದಿನ ತಿಂಗಳು ನೂತನ ಜೆಡಿಎಸ್ ಕಚೇರಿ ಉದ್ಘಾಟನೆಗೆ ಆಗಮಿಸುವರು ಎಂದರು.

ಈದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಶ್ರೀನಿವಾಸ್, ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಇನ್ನಿತರ ಪ್ರಮುಖ ಮುಂಖಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Namma Challakere Local News
error: Content is protected !!