ಚಳ್ಳಕೆರೆ ನ್ಯೂಸ್ :

ವಿಶ್ವಗುರು ಶ್ರೀ ಬಸವಣ್ಣ ನವರ 891 ನೇ ಜಯಂತೋತ್ಸವ ‌ಚಳ್ಳಕೆರೆ ನಗರದಲ್ಲಿ ಶ್ರೀ ‌ಅದ್ದೂರಿಯಾಗಿ‌ ಜರುಗಿತು.

ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಇಂದು ನಗರದ ರಿಂಗ್ ರೋಡ್ ಸಮೀಪದ ಶ್ರೀ ‌ರಾಷ್ಟ್ರೀಯ ಬಸವ ಸ್ಥಳದಿಂದ ನೆಹರು ವೃತ್ತ ಹಾಗೂ ಬೆಂಗಳೂರು ರಸ್ತೆಯ ‌ಶ್ರೀ ಬಸವೇಶ್ವರ ವೃತ್ತದವರೆಗೆ‌ ಶ್ರೀ ಬಸವ ದಳದ ಮಹಿಳಾ ಮಂಡಳಿಯಿಂದ ಶ್ರೀ ಬಸವೇಶ್ವರ ಭಾವತ್ರಿದ‌ ಮೆರವಣಿಗೆ ನಡೆಯಿತು.

ಇನ್ನೂ‌ ನಗರದ ಬಸವದಳದ ಸ್ಥಳದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇನ್ನೂ‌ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ನಗರಸಭೆ ಸದಸ್ಯೆ ಮಂಜುಳಾ ಪ್ರಸನ್ನ ಕುಮಾರ್ ಭಾಗವಹಿಸಿ ಇಂದಿನ‌ ಕಾಲಕ್ಕೆ ಬಸವಣ್ಣನವರ ತತ್ವ ಆದರ್ಶಗಳು ದಾರಿದೀಪವಾಗಿವೆ ಇದರಿಂದ ಯುವ ಜನತೆ‌ ಬಸವಣ್ಣನವರ ಹಾದಿಯಲ್ಲಿ ‌ನಡೆಯಬೇಕು ಎಂದರು.

ಇನ್ನೂ ಇದೇ ಸಂಧರ್ಭದಲ್ಲಿ ಪ್ರವಚನ ನೀಡಿದ ಬಸವಲಿಂಗ ಮಹಾ ಸ್ವಾಮಿಗಳು,

‌ಜಿ.ಹೆಚ್.ಹನುಮಂತಪ್ಪ, ಜ್ಯೋತಿ ನಾಗರಾಜ್, ಡಿ.ಶಬ್ರಿನಾ ಮಹಮ್ಮದ್ ಅಲಿ, ಪ್ರತಿಭಾ ಬಸವರಾಜ್, ತಿಪ್ಪೇಸ್ವಾಮಿ, ಗೋಕರ್ಣ, ಇನ್ನೂ ಮುಂತಾದವರು ಇದ್ದರು.
.

Namma Challakere Local News
error: Content is protected !!