ಚಳ್ಳಕೆರೆ ನ್ಯೂಸ್ :
ಬಯಲು ಸೀಮೆ ಜೆಬಿಹಳ್ಳಿ ಗ್ರಾಮದ ಸಮೀಪ ಚಿರತೆ ಪ್ರತ್ಯಕ್ಷ
ಗ್ರಾಮಸ್ಥರಲ್ಲಿ ಆತಂಕ
ಹೌದು ಬಿಸಿಲ ನಾಡು
ಮೊಳಕಾಲ್ಕೂರು ತಾಲೂಕಿನ ಜೆಬಿ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ
ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ
ಶುರುವಾಗಿದೆ.
ಕಳೆದ ನಾಲೈದು ದಿನಗಳಿಂದಲೂ ಆಹಾರ ಹರಸಿ ಚಿರತೆಯೊಂದು ಹಲವು ಗ್ರಾಮಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದು ಇದನ್ನು
ಕಂಡಂತಹ ಜನರು, ಭಯ ಭೀತಿಗೊಂಡಿದ್ದಾರೆ.
ಜೆಪಿ ಹಳ್ಳಿ ಮತ್ತು ಹೊಸಳ್ಳಿ
ಗ್ರಾಮದಲ್ಲಿ ಈಗಾಗಲೇ ಹಸು ಮತ್ತು ಎಮ್ಮೆಗಳ ಮೇಲೆ ಚಿರತೆ ದಾಳಿ
ನಡೆಸಿದ ಪರಿಣಾಮ ಸುಮಾರು 3-4 ಜಾನುವಾರುಗಳು ಸಾವನಪ್ಪಿವೆ ಎಂದು ಸ್ಥಳೀಯ ಅಭಿಪ್ರಾಯವಾಗಿದೆ.