ಕಾಂಗ್ರೆಸ್ ಪಕ್ಷ ಸಮುದ್ರ ಮತ್ತು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ ಲೋಕಸಭಾ ಕೈ ಅಭ್ಯರ್ಥಿ ಬಿ ಎನ್ ಚಂದ್ರಪ್ಪ.

ನಾಯಕನಹಟ್ಟಿ:: ಕಾಂಗ್ರೆಸ್ ಪಕ್ಷ ಸಮುದ್ರ ಮತ್ತು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ ಎಂ ಚಂದ್ರಪ್ಪ ಹೇಳಿದ್ದಾರೆ.
ಶುಕ್ರವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ 2024ರ ಲೋಕಸಭಾ ಚುನಾವಣೆಯ ಬಿ ಫಾರಂಗೆ ಪ್ರಥಮವಾಗಿ ವಿಶೇಷ ಪೂಜೆಯನ್ನು ಒಳಮಠ ಮತ್ತು ಹೊರಮಠದಲ್ಲಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಪ್ರಭುಸ್ವಾಮಿ ಬಂಡೆ ಕಪಿಲೆ ಓಬಣ್ಣ, ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್, ಜಿ ಬಿ. ಮುದಿಯಪ್ಪ, ಟಿ ಬಸಪ್ಪ ನಾಯಕ, ಹಿರೇಹಳ್ಳಿ ವಕೀಲ ಮಲ್ಲೇಶ್, ಮಲ್ಲೂರಹಳ್ಳಿ ಕೆ ಟಿ ನಾಗರಾಜ್, ನಾಯಕನಹಟ್ಟಿ ಓಬಳೇಶ್, ಇನ್ನು ಮುಂತಾದವರು ಇದ್ದರು

Namma Challakere Local News
error: Content is protected !!