ನಾಯಕನಹಟ್ಟಿ:: ಸಮೀಪದ ಜೋಗಿಹಟ್ಟಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ಶ್ರೀ ದುರ್ಗಾಪರಮೇಶ್ವರಿ ನೂತನ ದೇವಸ್ಥಾನ ಪ್ರಾರಂಭೋತ್ಸವ ಪ್ರಯುಕ್ತ.
ಸೋಮವಾರ ಜೋಗಿಹಟ್ಟಿ ಗ್ರಾಮಸ್ಥರು ಸಕಲ ಬಿರುದಾವಳಿಗಳೊಂದಿಗೆ ಹತ್ತಿರದ ಹಿರೇಕೆರೆಯಲ್ಲಿ ನೂತನ ಉತ್ಸವ ಮೂರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿ ಗಂಗಾ ಪೂಜೆಯನ್ನು ಅದ್ದೂರಿಯಾಗಿ ಸಕಲ ಪೂಜಾ ಕೈ ಕಾರ್ಯಗಳನ್ನು ಸಲ್ಲಿಸಿ ನಂತರ ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಅದ್ದೂರಿ ಕುಂಭಮೇಳ ತಮಟೆ ಉರುಮೆ ಸಕಲ ವಾದ್ಯಗಳೊಂದಿಗೆ ಗ್ರಾಮಕ್ಕೆ ಕರೆತರಲಾಯಿತು.

ಇನ್ನೂ ಗ್ರಾಮದ ಮಹಿಳೆಯರು ದಾರಿ ಉದ್ದಕ್ಕೂ ಶ್ರೀ ದುರ್ಗಾಪರಮೇಶ್ವರಿ ದೇವಿಯ ನೆನೆಯುತ್ತಾ ಸೋಬಾನೆ ಪದ ದೇವಿಯ ಕುರಿತು ಪ್ರಾರ್ಥನೆ ಪದಗಳನ್ನು ಹಾಡುತ್ತಾ ನೆನೆದರು.
ಶ್ರೀ ದುರ್ಗಾಪರಮೇಶ್ವರಿ ದೇವಿ ನೂತನ ದೇವಾಲಯದ ಪ್ರಾರಂಭೋತ್ಸವದ ಪ್ರಯುಕ್ತ ನಾಳೆ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ನೂತನ ದೇವಾಲಯದ ಉದ್ಘಾಟನೆಯನ್ನು ಶ್ರೀ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ ಅವರ ಅಮೃತ ಹಸ್ತಗಳಿಂದ ಉದ್ಘಾಟಿಸಲಾಗುವುದು ಎಂದು ಗ್ರಾಮದ ಹಿರಿಯರು ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡ ಹುರುಳಿ ತಿಪ್ಪೇಸ್ವಾಮಿ, ಎಂ. ಜಿ. ತಿಪ್ಪೇಸ್ವಾಮಿ, ಹಟ್ಟಿಯ ಯಜಮಾನ ಸಣ್ಣ ನಾಗಪ್ಪ, ಮಾಳಿಗೆ ತಿಮ್ಮಯ್ಯ, ದಡ್ಡಪ್ಪ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಮಲ್ಲಪ್ಪ, ಕಾಶಿಪುರ ದುರುಗಪ್ಪ, ಉರುಕಜ್ಜರ್ ರತ್ನಪ್ಪ, ಮತ್ತು ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸಣ್ಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಟಿ. ತಿಪ್ಪೇಶ್, ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು. ಹಾಗೂ ಅಂಬೇಡ್ಕರ್ ಕಾಲೋನಿಯ ಸಮಸ್ತ ಗ್ರಾಮಸ್ಥರು ಇದ್ದರು.
[2/12, 7:59 PM] Ramanjaneya Reporter Ramu Reporter: ಶ್ರೀ ಆಂಜನೇಯ ಸ್ವಾಮಿ ಕಳಸ ಸ್ಥಾಪನೆ ಗುಂತಕೋಲನಮ್ಮಹಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು

ನಾಯಕನಹಟ್ಟಿ:: ಶ್ರೀ ಆಂಜನೇಯ ಸ್ವಾಮಿ ಪೂಜಾ ಕೈ ಕಾರ್ಯಗಳ ಮೂಲಕ ಕಳಸ ಸ್ಥಾಪನೆಗೆ ಭಕ್ತಿ ಭಾವಕ್ಕೆ ಸಾಕ್ಷಿಯಾದ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರು.

ಸಮೀಪದ ಅಬ್ಬೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 6.45.ಗಂಟೆ ಗೆ ಶ್ರೀ ಆಂಜನೇಯ ಸ್ವಾಮಿಯ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಕಳಸ ಸ್ಥಾಪನೆ ಮಾಡಲಾಯಿತು.

ಗ್ರಾಮದ ಮುಖಂಡ ಬಿ.ಚಂದ್ರಣ್ಣ ಮಾತನಾಡಿ ಶ್ರೀ ಆಂಜನೇಯ ಸ್ವಾಮಿ ಕೃಪಾ ಆಶೀರ್ವಾದ ಗ್ರಾಮದ ಪ್ರತಿಯೊಬ್ಬರ ಮೇಲೆ ಇರಲಿ ಎದ್ದರು.

ಯುವ ಮುಖಂಡ ಜಿ .ಎಂ. ಜಯಣ್ಣ ಮಾತನಾಡಿ ನಮ್ಮ ಗ್ರಾಮದ ಬಹುದಿನದ ಕನಸು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಊರಿನ ಸಮಸ್ತ ಗ್ರಾಮಸ್ಥರು ಸಮ್ಮುಖದಲ್ಲಿ ಇಂದು ವಿಜೃಂಭಣೆಯಿಂದ ಕಳಸ ಸ್ಥಾಪನೆಯನ್ನು ಮಾಡಲಾಗಿದೆ.
ಶ್ರೀ ಆಂಜನೇಯ ಸ್ವಾಮಿ ದೇವರ ಅನುಗ್ರಹದಿಂದ ಗ್ರಾಮಕ್ಕೆ ಉತ್ತಮ ಮಳೆ ಬೆಳೆ ಶಾಂತಿ ಕರುಣಿಸಲಿ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಬಿ ಚಂದ್ರಣ್ಣ, ಮಾಳಿಗೆ ಪಾಪಯ್ಯ, ಮೀಸೆ ಓಬಯ್ಯ, ಹೊಸ ಕಪಿಲೆ ಬೋರಯ್ಯ, ಮೂಕ ಓಬಯ್ಯ, ದೋ. ಜಗಲೂರಯ್ಯ, ಮಲ್ಲಿಕಾರ್ಜುನ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಿ. ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಪಟೇಲ್ ಗುಂಡಯ್ಯ, ಸಿದ್ದಲಿಂಗಮ್ಮ ಗುಂಡಯ್ಯ, ಮಂಜುಳಾ ದುರುಗೇಶ್, ಕೆ .ಟಿ. ಮಲ್ಲಿಕಾರ್ಜುನ್ ವಕೀಲ ವೈ. ಮಲ್ಲೇಶ್, ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ಬೂಟ್ ತಿಪ್ಪೇಸ್ವಾಮಿ, ಶಿಕ್ಷಕ ಡಿ ಎಂ ಪಾಲಯ್ಯ, ಎನ್ ತಿಪ್ಪೇಸ್ವಾಮಿ, ಕಾಮಯ್ಯ, ಚನ್ನಪ್ಪ, ರಂಗಪ್ಪ, ಶ್ರೀನಿವಾಸ, ಮದಕರಿ ತಿಪ್ಪೇಸ್ವಾಮಿ, ರುದ್ರಮನಿ, ಬಂಗಾರಿ ತಿಪ್ಪೇಸ್ವಾಮಿ, ಸಮಸ್ತ ಗುಂತುಕೋಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು.

Namma Challakere Local News
error: Content is protected !!