ಚಳ್ಳಕೆರೆ : ಬಯಲು ಸೀಮೆಯಲ್ಲಿ ಕ್ರೀಡೆ ಎಂಬುದು ಮರಿಚೀಕೆಯಾಗಿತ್ತು ಆದರೆ ಅತ್ಯುತ್ತಮ ಸೋಲಾರ್ ಕಂಪನಿಯಾದ ಗ್ಯಾಲನ್ ಸೋಲಾರ್ ಕಂಪನಿಯಿAದ ಕ್ರೀಡೆಯನ್ನು ಪ್ರೋತ್ಸಾಹಿಸುವುದು ಕ್ರೀಡಾ ಪಟುಗಳಲ್ಲಿ ಆಸಕ್ತಿ ಹಿಮ್ಮಡಿಗೊಳಿಸಿದೆ ಎಂದು ಗ್ಯಾಲನ್ ಸೋಲಾರ್ ಕಂಪನಿಯ ಅಧೀಕ್ಷಕರಾದ ಕಾವ್ಯ ಹೇಳಿದರು.
ಅವರು ನಗರದ ಬಿ.ಎಮ್.ಜಿ.ಎಚ್.ಎಸ್ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ಯಾಲನ್ ಸೋಲಾರ್ ನಮ್ಮೆಲ್ಲರ ಮನೆ ಮನೆಯ ಬಿಸಿನೀರಿನ ಪಾರ್ಟ್ನರ್ ಅವರ ಸಹಕಾರದೊಂದಿಗೆ ಭಗತ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಫೆಬ್ರವರಿ 3 ಮತ್ತು 4ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ಮಾತನಾಡಿದರು, ಕ್ರೀಡೆ ಎಂಬುದು ಮನುಷ್ಯನ ದೈಹಿಕ ಮತ್ತು ಮಾನಸೀಕ ಒತ್ತಡಗಳಿಂದ ದೂರ ಮಾಡುತ್ತದೆ ಇನ್ನೂ ಆರೋಗ್ಯಕರ ಜೀವನಕ್ಕೆ ಕ್ರೀಡೆ ಉತ್ತಮವಾದದ್ದು ಇದರಿಂದ ಇಂತಹ ಮಧ್ಯ ಕರ್ನಾಟಕ ಭಾಗದಲ್ಲಿ ರಾಜ್ಯ ಮಟ್ಟದ ಪುಟ್‌ಬಾಲ್ ಟೂರ್ನಿಮೆಂಟ್ ಆಯೋಜಿಸಿರುವುದು ಸಂತಸದಾಯಕವಾಗಿದೆ ಎಂದರು.
ಇನ್ನೂ ವಿಶ್ವಕರ್ಮ ಪರಿಷತ್‌ನ ರಾಜ್ಯಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ, ರಾಜ್ಯ ಮಟ್ಟದ ಹೊನಲು ಬೆಳಕಿನ ಪುಟ್ಟ್ಬಾಲ್ ಟೂರ್ನಿಮೆಂಟ್ ಬಯಲು ಸೀಮೆಯ ಕ್ರೀಡಾಪಟುಗಳಿಗೆ ವರದಾನವಾಗಿದೆ. ಭಗತ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚಳ್ಳಕೆರೆ ಜನತೆಗೆ ಗ್ಯಾಲನ್ ಸೋಲಾರ್ ನ ಅಧಿಕೃತ ಮಾರಾಟಗಾರರಾಗಿರುವ ಕೆ.ಬಿ.ಎನ್ ಎಂಟರ್‌ಪ್ರೈಸಸ್ ಇವರ ವತಿಯಿಂದ ರಾಜ್ಯ ಮಟ್ಟದ ಪುಟ್ ಬಾಲ್ ಟೂರ್ನಿಮೆಂಟ್ ಆಯೋಜಿಸಿರುವುದು ಸಂತಸದಾಯಕವಾಗಿದೆ ಇದರಿಂದ ಇನ್ನೂ ಹೆಚ್ಚು ಹೆಚ್ಚು ಕ್ರೀಡೆಗಳು ಹೊರಹೊಮ್ಮಬೇಕು ಎಂದರು.

ಹೇಳಿಕೆ :
ರಾಜ್ಯದ ಮನೆ ಮಾತಾಗಿರುವ ಗ್ಯಾಲನ್ ಸೋಲಾರ್ ಬಿಸಿನೀರಿನ ಪಾರ್ಟ್ನರ್ ಈಗ ರಾಜ್ಯದೆಲ್ಲೆಡೆ ನಿಮಗೆ ಲಭ್ಯವಾಗಲಿದೆ, ತ್ವರಿತವಾಗಿ ಕರೆ ಮಾಡಿ ನಿಮ್ಮ ಮನೆಗೆ ಗ್ಯಾಲನ್ ಸೋಲಾರ್ ಪಡೆಯಿರಿ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ- 6362826559/ 9380026471 ಕರೆ ಮಾಡಿ ಮಾಹಿತಿ ತಿಳಿಯಿರಿ.
ಇದೇ ಸಂಧರ್ಭದಲ್ಲಿ ಮಂಜುನಾಥ್, ಜಯರಾಮ್, ದಾದಪೀರ್, ಸಾರ್ವಜನಿಕರು ಇತರ ಕ್ರೀಡಾ ಪಟುಗಳು ಹಾಜರಿದ್ದರು.

Namma Challakere Local News
error: Content is protected !!