ಚಳ್ಳಕೆರೆ: ಕರ್ನಾಟಕ
ಕಾರ್ಯನಿರತ
ಪತ್ರಕರ್ತರ
ಧ್ವನಿ (ರಿ.) ಚಳ್ಳಕೆರೆ ತಾಲೂಕು ಘಟಕ ಇವರಿಂದ ಡಿ.13 ಬುಧವಾರ ದಂದು ನಾಡಿನ ಕಾರ್ಯನಿರತ ಪತ್ರಕರ್ತರ
ಬೃಹತ್ ಪ್ರತಿಭಟನೆ ಧರಣಿ ನಡೆಸಲಿದ್ದಾರೆ.

ಸ್ಥಳ: ಸುವರ್ಣಸೌಧ ಬೆಳಗಾವಿ

ಬೇಡಿಕೆಗಳು :

  1. ಪತ್ರಕರ್ತರು ಕಾರ್ಯನಿರ್ವಹಿಸಲು ರಾಜ್ಯದಾದ್ಯಂತ ಓಡಾಡಲು ಉಚಿತ ಬಸ್ ಪಾಸ್ ಸೌಲಭ್ಯ.
  2. ಪ್ರಸ್ತುತ ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300 ಕ್ಕೂ ಅಧಿಕ ಸಿಬ್ಬಂದಿಗಳನ್ನು ಕೂಡಲೇ
    ನೇಮಿಸಿಕೊಳ್ಳಬೇಕು.
    ಆರ್. ದ್ಯಾಮರಾಜ್
    ತಾಲ್ಲೂಕು ಅಧ್ಯಕ್ಷರು
    320
  3. ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ 800 ಕ್ಕೂ ಅಧಿಕ ಪತ್ರಿಕೆಗಳನ್ನು ಕಾರ್ಮಿಕ
    ಇಲಾಖೆಯಲ್ಲಿ ನೊಂದಣಿಯಾಗುವಂತೆ ಸೂಕ್ತ ಕಟ್ಟು ನಿಟ್ಟಿನ ಕಾನೂನು ಕ್ರಮ ವಹಿಸಬೇಕು.
  4. ರಾಜ್ಯದ ಸಮಸ್ತ ಪತ್ರಕರ್ತರಿಗೆ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಹಾಗೂ ಪ್ರತಿಯೊಬ್ಬ
    ವರದಿಗಾರರಿಗೂ ಜೀವ ವಿಮಾ ಸೌಲಭ್ಯವನ್ನು ಸರ್ಕಾರ ಭರಿಸಬೇಕು.
  5. ಸಾರ್ವಜನಿಕ ಸೇವೆಯಲ್ಲಿ ಇರುವ ಪತ್ರಕರ್ತರು ತಮ್ಮ ಸ್ವಂತ ವಾಹನಗಳ ಮೂಲಕ ಕೆಲಸ ಕಾರ್ಯಗಳ
    ನಿಮಿತ್ತ ಸಂಚರಿಸಲು ಉಚಿತ ಟೋಲ್ (ರಸ್ತೆ ಸುಂಕ) ವ್ಯವಸ್ಥೆ ಕಲ್ಪಿಸಬೇಕು.
    ಪತ್ರಕರ್ತರ ಜ್ವಲಂತ ಸಮಸ್ಯೆಗಳ ಹಾಗೂ ಮೂಲಭೂತ ಸೌಕರ್ಯಗಳ ಈಡೇರಿಕೆಗಾಗಿ ಕಾರ್ಯನಿರತ
    ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದ್ದು ಈ ಹೋರಾಟಕ್ಕೆ
    ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸರ್ವ ಸದಸ್ಯರು, ಪದಾಧಿಕಾರಿಗಳು ಹಾಗೂ ನಾಡಿನಾದ್ಯಂತ
    ಸೌಲಭ್ಯಗಳಿಂದ ವಂಚಿತರಾಗಿರುವ ಪತ್ರಕರ್ತ ಮಿತ್ರರು ಆಗಮಿಸಿ ಹೋರಾಟದಲ್ಲಿ ಭಾಗವಹಿಸುವುದರ
    ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸೋಣ.
    ರಾಜ್ಯದ ಎಲ್ಲಾ ಪತ್ರಕರ್ತರು ದಿನಾಂಕ 12-12-2025 ರಂದು ಕಿತ್ತೂರಿಗೆ ಆಗಮಿಸುತ್ತಾರೆ.
    ದಿನಾಂಕ 15-12-2025 ರಂದು ಕ್ರಾಂತಿ ನೆಲ ಕಿತ್ತೂರಿನಿಂದ ಪ್ರತಿಭಟನೆ ಪ್ರಾರಂಭಗೊಳ್ಳುತ್ತದೆ.
    ಕರ್ನಾಟಕ ಕಾರ್ಯನಿರತ ಪಾಕರ್ತರ ಧ್ವನಿ
    ತಾಲ್ಲೂಕು ಘಟಕ ಚಳ್ಳಕೆರೆ
    ಎಲ್ಲಾ ಪದಾಧಿಕಾರಿಗಳು/ಸರ್ವಸದಸ್ಯರುಗಳು
Namma Challakere Local News
error: Content is protected !!