ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಬಿಜೆಪಿ ಯುವ ಮುಖಂಡ ರಘು ಚಂದನ್ ಅಭಿಪ್ರಾಯ ಪಟ್ಟರು

ನಾಯಕನಹಟ್ಟಿ:: ಸೋಲು ಗೆಲುವು ಒಂದು ನಾಣ್ಯದ ಮುಖಗಳಿದ್ದಂತೆ ಎಂದು ಬಿಜೆಪಿ ಯುವ ಮುಖಂಡ ರವಿಚಂದ್ರನ್ ಹೇಳಿದ್ದಾರೆ .

ಅವರು ಶನಿವಾರ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಏಕಂತೇಶ್ವರ ಮಠ ಮನಮೈನಹಟ್ಟಿ ಹತ್ತಿರದ ಆವರಣದಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರಪ್ರಥಮ ಬಾರಿಗೆ ನಾಯಕನಹಟ್ಟಿ ಪ್ರೀಮಿಯರ್ ಲೀಗ್ ಎನ್ ಪಿ ಎಲ್ ಸೀಸನ್- 1 ಕ್ರೀಡಾಕೂಟವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ಗೆಲುವು ಸೋಲು ಯಾವತ್ತೂ ಒಂದು ನಾಣ್ಯದ ಎರಡು ಮುಖ ಸೋಲು ಗೆಲುವು ಯಾವತ್ತು ಸಮಾನವಾಗಿ ಸ್ವೀಕರಿಸಬೇಕು.
ಯಾವತ್ತೂ ಮನುಷ್ಯ ಸೋಲನ್ನು ನೋಡುತ್ತಾನೆ ಅವನಿಗೆ ಗೆಲವು ಬಹಳ ಚಿಕ್ಕದಾಗಿ ಕಾಣುತ್ತದೆ ಯಾವತ್ತೂ ಮನುಷ್ಯ ಜಲ್ದಿ ಗೆಲುವನ್ನು ನೋಡುತ್ತಾನೆ ಅವನಿಗೆ ಸೋಲು ಬಹಳ ದೊಡ್ಡದಾಗಿ ಕಾಣುತ್ತದೆ. ಕ್ರೀಡೆಯಲ್ಲಿ ಯಾರೇ ಗೆದ್ದರೂ ನಮ್ಮ ನಾಯಕನಹಟ್ಟಿ ಹೋಬಳಿಯವರು ಎಂಬ ಮನೋಭಾವನೆ ಪ್ರತಿಯೊಬ್ಬ ಕ್ರೀಡಾ ಪುಟಗಳಿಗೆ ಇರಬೇಕು ಎಂದರು.

ಇದು ವೇಳೆ ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ರಚಿತ 224 ಕ್ಷೇತ್ರಗಳೇ ಪೈಕಿ ನಮ್ಮ ಕ್ಷೇತ್ರ ಅತಿ ಕಡಿಮೆ ಮಳೆ ಬೀಳುವ ಮೆಡಿಕಲ್ಮೂರು ವಿಧಾನಸಭಾ ಕ್ಷೇತ್ರ ರೈತರಿಗೆ ಸಾಮಾನ್ಯ ಜನರಿಗೆ ಜೀವನ ಮಾಡುವುದೇ ಕಷ್ಟದ ಪರಿಸ್ಥಿತಿ ಇಂತ ಪರಿಸ್ಥಿತಿಯಲ್ಲಿ ಯುವಕರು ಕ್ರೀಡೆಯನ್ನು ಆಯೋಜಿಸಿರುವುದು ಸಂತಸ ತಂದಿದೆ ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಅಂಪರ್ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಆದ್ದರಿಂದ ಹೋಬಳಿಯ ಎಲ್ಲಾ ಕ್ರೀಡಾಪಟುಗಳು ಇಷ್ಟು ಬದ್ಧವಾಗಿ ಕ್ರೀಡೆಯನ್ನ ಸಂಭ್ರಮ ತಡಗರದಿಂದ ಆಡಬೇಕು ಎಂದರು.

ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಮಾತನಾಡಿ. ನಮ್ಮ ಹೋಬಳಿಯ ಕ್ರೀಡಾ ಪುಟಗಳು ತಾಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯಮಟ್ಟದಲ್ಲಿ ಪ್ರದರ್ಶಿಸುವಂತಹ ಕೆಲಸವಾಗಬೇಕು ಕ್ರೀಡೆ ದೇಹಕ್ಕೆ ಉತ್ತಮವಾದ ಔಷಧಿ ಇದ್ದಂತೆ ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಯುವಕರಿಗೆ ಕ್ರೀಡೆ ಅತ್ಯಂತ ಉತ್ತಮವಾದ ಎಂದರು.
ಇನ್ನು ಸಭೆಯನ್ನು ಉದ್ದೇಶಿಸಿ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಎನ್ ಮಹಾಂತಣ್ಣ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್ ಅನ್ವರ್, ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ, ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಎನ್ ಮಾಹಾಂತಣ್ಣ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ ಬಸಪ್ಪ ನಾಯಕ, ಅಬ್ಬೇನಹಳ್ಳಿ ಯುವ ಮುಖಂಡ ಎ ಪಿ ರೇವಣ್ಣ, ಶ್ರೀ ಕೆ ಟಿ ನಾಗಭೂಷಣ್ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೇಖಲಗೆರೆ, ಬಂಗಾರ ನಾಯಕ, ಗುಂತಕೋಲಮ್ಮನಹಳ್ಳಿ ಎಸ್ .ಶಿವತಿಪ್ಪೇಸ್ವಾಮಿ, ಎಂ ಎನ್ ತ್ರಿಶೂಲ್ ಕುಮಾರ್, ವಿಷ್ಣು, ನಿರಂಜನ್, ಮಧು, ತಿಪ್ಪೇಶ್, ಶಶಿಕುಮಾರ್, ತಿಪ್ಪೇಸ್ವಾಮಿ, ಪ್ರಹ್ಲಾದ್ ,ಕಲ್ಲೇಶ್, ಮಲ್ಲೇಶ್, ಮಹಾಂತೇಶ್, ಬೋರೇಶ, ಸುಧೀರ್, ಉಮೇಶ್ ಗೌಡ, ಬೋಸೆರಂಗಪ್ಪ, ಇತರರು ಇದ್ದರು

Namma Challakere Local News
error: Content is protected !!