ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ : ಗ್ರಾಪಂ.ನೂತನ ಅಧ್ಯಕ್ಷ ಸೇವ್ಯಾನಾಯ್ಕ್

ಚಳ್ಳಕೆರೆ : ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಎನ್ನುವುದು ನೆಪಮಾತ್ರ ಇಂತಹ ವೇದಿಕೆಯ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆ ಇದಾಗಿದೆ ಎಂದು ಗ್ರಾಪಂ.ನೂತನ ಅಧ್ಯಕ್ಷ ಸೇವ್ಯಾನಾಯ್ಕ್ ಹೇಳಿದರು.
ನಗರದ ತಳಕು ಹೋಬಳಿಯ ಹೊನ್ನುರು ಗ್ರಾಮದಲ್ಲಿ ಎಚ್‌ಪಿಬಿಎಸ್ ಶಾಲೆಯಲ್ಲಿ 2023/24 ನೇ ಸಾಲಿನ ಘಟಪರ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೆರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾಕಾರಂಜಿ ಪ್ರಮುಖ ಘಟ್ಟವಾಗಿದೆ, ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಹೊರತೆಗೆಯಲು ಇಂತಹ ಸುಸಜ್ಜಿತ ವೇದಿಕೆ ಪ್ರಮುಖವಾಗಿದೆ ಎಂದರು.
ಘಟಪರ್ತಿ ಕ್ಲಷ್ಟರ್‌ನ ಸಿಆರ್‌ಪಿ.ಶಿವಣ್ಣ ಮಾತನಾಡಿ, ಮಕ್ಕಳ ಮುಂದಿನ ಭಾವಿ ಭವಿಷ್ಯದಲ್ಲಿ ಸಾಧಿಸುವ ಕ್ರಿಯಾ ಆಲೋಚನೆಗೆ ಪ್ರತಿಭಾ ಕಾರಂಜಿ ಹಿಂಬು ನೀಡಿತ್ತದೆ ನಾಲ್ಕು ಗೋಡೆಗಳ ಮಧ್ಯೆ ಕಲಿತ ಪಾಠವನ್ನು ಮಕ್ಕಳು ಪ್ರತಿಭಾಕಾರಂಜಿಯಿAದ ತಮ್ಮ ಸಾಮರ್ಥ್ಯ ಹೊರಹಾಕುವ ವೇದಿಕೆಯಾಗಿದೆ. ಮಕ್ಕಳ ಪ್ರತಿಭೆಗೆ ಅನುಗುಣವಾಗಿ ತೀರ್ಪುಗಾರರು ವಿವೇಚನೆಯಿಂದ ಪ್ರತಿಭೆಯನ್ನು ಗುರುತಿಸಿ ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ.ಅಧ್ಯಕ್ಷಗುರುಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರತಿಭೆ ಹರಳಬೇಕು, ಗಡಿಗ್ರಾಮಗಲ್ಲಿ ಇಂತಹ ಕಾರ್ಯಕ್ರಮಗಳು ನಡೆದಾಗ ಮಾತ್ರ ಮ್ಕಕಳ ಭವಿಷ್ಯ ರೂಪಿಸಲು ಸಾಧ್ಯ. ವಿದ್ಯಾರ್ಥಿ ಜೀವನದ ಕನಸ ಮಾಡಲು ಈ ಹಂತದ ಚಟುವಟಿಕೆಗಳು ಪ್ರೇರಕ ಶಕ್ತಿಯಗುತ್ತಾವೆ ಆದ್ದರಿಂದ ಶಿಕ್ಷಕರು ಮಾರ್ಗದರ್ಶಕರಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸವ ಕೆಲಸವಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ.ಸದಸ್ಯಎಚ್‌ವಿ.ನಾರಾಯಣರೆಡ್ಡಿ, ಕೃಷ್ಣಪ್ಪ, ಲಕ್ಷ್ಮಿದೇವಿ, ಮಾರಕ್ಕ, ದುರುಗಮ್ಮ, ಟಿ.ಗೋವಿಂದಪ್ಪ, ತಿಪ್ಪಾರೆಡ್ಡಿ, ಟಿ.ಶಿವಾರೆಡ್ಡಿ, ಮುಖ್ಯ ಶಿಕ್ಷಕಿ ಪ್ರತಿಭಾ, ಘಟಪರ್ತಿಎಂ.ನಾಗರಾಜ್, ಈಶ್ವರ್,ವೆಂಕಟಸ್ವಾಮಿ, ಕೆ.ತಿಪ್ಪೇಸ್ವಾಮಿ, ಹನುಮಂತರೆಡ್ಡಿ, ಪಾಪಣ್ಣ, ಲಕ್ಷ್ಮಿದೇವಿ ಹೊನ್ನೂರುಮಾರಣ್ಣ, ಇದ್ದರು.
ನಿವೃತ್ತಿ ಮುಖ್ಯ್ಯೊಪಾಧ್ಯಾಯರಾದ ಚಿದಂಬರಮೂರ್ತಿ ರವರಿಗೆ ಸನ್ಮಾನ ಮಾಡಲಾಯಿತು

Namma Challakere Local News
error: Content is protected !!