ಚಳ್ಳಕೆರೆ : ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವಾರಿಯಾಗಿ ಬಿತ್ತನೆ ಬೀಜ ದಾಸ್ತನು ಮಾಡಲಾಗಿದೆ ಇನ್ನೂ ರೈತರಿಗೆ ಯಾವುದೆ ರೀತಿಯಲ್ಲಿ ತೊಂದರೆಯಾದAತೆ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಹೇಳಿದ್ದಾರೆ.
ಅವರು ನಗರದ ಕೃಷಿ ಉತ್ಪನ್ನಮಾರುಕಟ್ಟೆ ಗೋದಾಮಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಶೇಂಗಾ ಗೋದಾಮಿನಲ್ಲಿ ರೈತರಿಗೆ ಶೇಂಗಾ ವಿತರಣೆ ಮಾಡುವ ಮೂಲಕ ಮಾಧ್ಯಮದೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆ ಮಾಡುತ್ತಿರುವುದು ಪ್ರತಿ ವರ್ಷದಂತೆ ಈ ಬಾರಿಯೂ ಬಿತ್ತನೆಬೀಜ ಗೊಬ್ಬರ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಬಿತ್ತನೆ ಶೇಂಗಾ ಈಗಾಗಲೇ 20 ಸಾವಿರ ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ,
ಇನ್ನೂ ಪ್ರತಿ ಆರ್ಎಸ್ಕೆ ಕೇಂದ್ರಗಳಲ್ಲಿ ರೈತರಿಗೆ ಶೇಂಗಾ ವಿರಣೆ ಮಾಡಲಾಗುತ್ತದೆ, ಇನ್ನೂ ರೈತರಿಗೆ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತದೆ ಎಂದರು.
ಸ್ಥಳದಲ್ಲಿ ಶೇಂಗಾ ಬೀಜದ ಬಿಣಮಟ್ಟ ಪರೀಶಿಲನೆಗೆ ಅವಕಾಶ :
ರೈತರು ಸಹಾ ಖರೀದಿ ಮಾಡುವಾಗ ಸ್ಥಳದಲ್ಲೇ ಬಿತ್ತೆನೆ ಶೇಂಗಾಗುಣ ಮಟ್ಟ ಪರಿಶೀಲನೆ ಮಾಡಿಕೊಂಡು ತೆಗೆದುಕೊಂಡುವ ಹೋಗುವ ವ್ಯವಸ್ಥೆ ಮಾಡಲಾಗುವುದು. ಈಗಾಗಲೆ ಮಳೆಬಂದ ತಕ್ಷಣದ ಬಿತ್ತನೆ ಮಾಡಲು ಅಗತ್ಯ ಗೊಬ್ಬರ ಬೀಜ ಕೊರತೆಯಾಗದಂತೆ ಹಾಗೂ ನಿಗಧಿತ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಬೀಜಗೊಬ್ಬರ ಮಾರಾಟಗಾರಿರಿಗೆ ಎಚ್ಚರಿಕೆ ಕೂಡ ನೀಡಲಾಗಿದೆ ಎನ್ನುತ್ತಾರೆ.
ಅಕ್ರಮಕ್ಕೆ ಕಡಿವಾಣ ಶೇಂಗಾ ಪ್ರತಿ ಪ್ಯಾಕೇಟ್ ಗೆ ಕ್ಯೂಆರ್ ಕೋಡ್ :
ರಾಜ್ಯದಲ್ಲಿ ಬಾರೀ ಪ್ರಮಾಣದಲ್ಲಿ ಶೇಂಗಾ ಬಿತ್ತನೆ ಬೀಜದಲ್ಲಿ ಅಕ್ರಮ ಮಾಡಲಾಗುತ್ತದೆ ಎಂಬ ಸುದ್ದಿಗೆ ಕಡಿವಾಣ ಹಾಕಲು ಪ್ರತಿ ಪ್ಯಾಕೇಟ್ನಲ್ಲಿ ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡುವ ಮೂಲಕ ರೈತನ ಎಪ್ಐಡಿ ಹಾಗೂ ಹೆಸರು ನಮೂದು ಹಾಗುತ್ತದೆ, ತದನಂತರ ಬಿಲ್ ಮೊತ್ತ ಪಾವತಿಗೆ ಆನ್ ಲೈನ್ ಕೇಳುತ್ತದೆ ಇದರಿಂದ ಯಾವುದೇ ಅಕ್ರಮಗಳು ನಡೆಯದಂತೆ ಪಾರದರ್ಶಕವಾಗಿ ಬಿತ್ತನೆ ಬೀಜ ವಿತರಣೆ ಯಾಗುತ್ತದೆ.
ಎಲ್ಲಿಲ್ಲ ಶೇಂಗಾ ವಿರತಣೆ :
ನಗರದ ಎಪಿಎಂಸಿ ಯಾರ್ಡ್, ಪರಶುರಾಂಪುರ, ನಾಯಕನಹಟ್ಟಿ, ತಳಕು ಕೃಷಿ ಇಲಾಖೆ ಕೇಂದ್ರಗಳಲ್ಲಿ ಶೇಂಗಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. 1 ಕ್ವಿಂಟಾಲ್ ಶೇಂಗಾಕ್ಕೆ 8850 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ 1400 ರೂ. ಸಾಮಾನ್ಯ ವರ್ಗದ ರೈತರಿಗೆ, ಎಸ್ಸಿ ,ಎಸ್ಟಿ 2100 ರಿಯಾತಿ ಇರುತ್ತದೆ.
ಪ್ರತಿ ಶೇಂಗಾ ಪ್ಯಾಕೇಟ್ನಲ್ಲಿ ಕ್ಯೂಆರ್ ಕೋಡ್ ಇರುತ್ತದೆ ಇದರಿಂದ ಒಂದು ಪ್ಯಾಕೇಟ್ ಕೂಡ ಮಿಸ್ ಹಾಗುವುದಿಲ್ಲ ಇದರಿಂದ ಅರ್ಹ ಎಲ್ಲಾ ರೈತರಿಗೆ ತಲುಪಿಸಲು ಸರಕಾರವೇ ರೂಪಿಸಿದೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇದೆ ಪ್ರಥಮ ಬಾರಿಗೆ ಬಿತ್ತನೆ ಶೇಂಗಾ ಪಾಕೇಟ್ ಮೇಲೆ ಕ್ಯೂಆರ್ ಕೋಡ್ ಇರುವ ಬಿತ್ತನೆ ಬೀಜದ ಪ್ಯಾಕೇಟ್ ದಾಸ್ತಾನು ಮಾಡಲಾಗುತ್ತಿದೆ –ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್