ಕೇಬಲ್ ಕಳ್ಳರಿಗೆ ಇಲ್ಲವಾದಿತೇ ಕಡಿವಾಣ..?
ರೈತರ ತೋಟಗಳಲ್ಲಿ ಕೇಬಲ್ ಕಳ್ಳತನ : ಪೊಲೀಸರ ನಿದ್ದೆಗೆಡಿಸಿದ ಕಳ್ಳರು
ಚಳ್ಳಕೆರೆ: ಇತ್ತಿಚೀಗೆ ಕಳ್ಳರು ತಮ್ಮ ಕೈ ಚಳಕ ತೋರುವುದು ಮಾಮೂಲು ಹಾಗಿದೆ ಹೌದು ನಿಜಕ್ಕೂ ಕಾನೂನು ಸುವಸ್ಥೆ ಯತ್ತಾ ಸಾಗುತ್ತಿದೆ ಎಂಬುದು ಕಳ್ಳತನ ಪ್ರಕರಣಗಳೇ ಸಾಕ್ಷಿಕರಿಸುತ್ತಿವೆ
ಅದರಂತೆ ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ಪಂಪ್ ಸೆಟ್ ಕೇಬಲ್ ಕಳ್ಳರ ಹಾವಳಿ ಹೆಚ್ಚಿದ್ದು ಇಲ್ಲಿನ ರೈತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ.
ರೇಣುಕಪುರ ಗ್ರಾಮದ ಸುತ್ತ ಮುತ್ತಲಿನ ನೀರಾವರಿ ಜಮೀನುಗಳಲ್ಲಿ ರೈತರ ಮೋಟಾರ್ ಕೇಬಲ್ ಗಳು ಕಳ್ಳತನವಾಗುತ್ತಿದ್ದು ರೈತರು ಇದರಿಂದ ರೋಸಿ ಹೋಗಿದ್ದಾರೆ ರೇಣುಕಾಪುರದ ಗೌಡ್ರ ಕಲ್ಲಿವೀರಪ್ಪ ನವರ ತೋಟದಲ್ಲಿ ನಿರಂತರವಾಗಿ 3 ಬಾರಿ ಕೇಬಲ್ ಕಳ್ಳತನ ವಾಗಿದ್ದು 1 ಬಾರಿ ಮೋಟಾರ್ ಮತ್ತು ಪಂಪ್ ಸೆಟ್ ಸಮೇತ ಕಳವು ಮಾಡಿದ್ದು ಸುಮಾರು 50ಸಾವಿರ ರೂಪಾಯಿ ನಷ್ಟ ವಾಗಿದ್ದು.
ಇನ್ನೂ ಸುಮಾರು 20ತೋಟಗಳಲ್ಲಿ ಕಳ್ಳತನ ವಾಗಿದ್ದು. ತಳುಕು ಪೊಲೀಸ್ ಠಾಣೆಗೆ ಪ್ರಕರಣ ದಾಖಲೆ ಮಾಡಿ ಕೇಬಲ್ ಕಳ್ಳತನದಿಂದ ಹಾವಳಿ ತಪ್ಪಿಸಿ ಎಂದು ರೈತರು ಮನವಿ ಮಾಡಿದ್ದಾರೆ.