ಚಳ್ಳಕೆರೆ : ಸೌದೆ ಗಲಾಟೆಯೊಂದು ಪೋಲೀಸ್ ಠಾಣೆ ಮೆಟ್ಟಿಲಿರಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ
ಹೌದು ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ರೈತ ಸುರೇಂದ್ರ ಹಾಗೂ ಕೂಲಿಕಾರ ತಿಪ್ಪೆಸ್ವಾಮಿ ಮಧ್ಯೆ ಸೌದೆ ವಿಚಾರವಾಗಿ ಚಿಕ್ಕದಾಗಿ ಗಲಾಟೆಯಾಗಿ ನಂತರ ಅದು ತರಾಕ್ಕೆ ಹೇರಿ,

ಅಲ್ಲೆ ಮಾಡುವಷ್ಟರ ಮಟ್ಟಿಗೆ ಗಲಾಟೆ ವಿಕೋಪಕ್ಕೆ ಹೋಗಿದೆ ಇನ್ನೂ ಗ್ರಾಮದಲ್ಲಿ ನಡೆದ ಹಲ್ಲೆ ಪ್ರಕರಣ ಪೊಲಿಸ್ ಠಾಣೆಯ ಮೆಟ್ಟಿಲೆರಿ ಚಳ್ಳಕೆರೆ ಸಾರ್ವಜನಿಕರ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಗಾಯಳುಗಳು ಮತ್ತೆ ಆಸ್ವತ್ರೆ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರ ಮದ್ಯೆ ಗಲಾಟೆಯಾಗಿ ನಂತರ ತಿಪ್ಪೆಸ್ವಾಮಿಗೆ ಹಲ್ಲೆ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗಿವೆ.
ಇನ್ನೂ ಪ್ರಕರಣ ಕೈಗೆತ್ತಿಕೊಂಡ ಚಳ್ಳಕೆರೆ ಪೊಲೀಸರು ಎರಡು ಕಡೆಯವರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿದ್ದಾರೆ.
ಅದರAತೆ ಸುರೇಂದ್ರ ನೀಡಿದ ದೂರಿನ್ವಯ ತಿಪ್ಪೇಸ್ವಾಮಿ, ಹೆಂಡತಿ ಗಂಗಮ್ಮ, ಮಕ್ಕಳಾದ ಶಶಿಕುಮಾರ, ಯಲ್ಲಪ್ಪ ನಾಲ್ಕು ಜನರ ಮೇಲೆ ಪಿಎಸೈ ಧರೆಪ್ಪ ಬಾಳಪ್ಪ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ತನಿಖೆ ನಡೆಸಿದರೆ.

ಇನ್ನೂ ತಿಪ್ಪೆಸ್ವಾಮಿ ನೀಡಿದ ದೂರಿನ್ವಯವಾಗಿ ಸುರೇಂದ್ರ, ಲಕ್ಕಮ್ಮ, ನಾಗೇಶ ಮೂರು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಇನ್ನೂ ದೂರು ದಾಖಲಿಸಿಕೊಂಡ ಪಿಎಸ್‌ಐ ಪ್ರಮಿಳ ಎಸ್ಸಿ -ಎಸ್ಟಿ ಕಾಯ್ಕೆ ಸೇರಿದಂತೆ ವಿವಿಧ ಕಾಲಂ ಅಡಿಯಲ್ಲಿ ಪ್ರಕಣದ ದಾಖಲಿಸಿಕೊಂಡು ಸುರೇಂದ್ರ, ತಾಯಿ ಲಕ್ಕಮ್ಮ , ಮಗ ನಾಗೇಶ ಮೂರು ಜನರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಒಟ್ಟಾರೆ ಗ್ರಾಮದ ಎರಡು ಕೋಮುಗಳ ಮದ್ಯೆ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೆರಿ ತಾರಕಕ್ಕೆರಿದೆ

About The Author

Namma Challakere Local News
error: Content is protected !!