ಚಳ್ಳಕೆರೆ : ಕಳೆದ ಹತ್ತು ವರ್ಷಗಳ ಅಭಿವೃದ್ದಿಗೆ ಈ ಬಾರಿ ನನಗೆ ಶ್ರೀ ರಕ್ಷೆಯಾಗಲಿದೆ, ಕಾಂಗ್ರೇಸ್ ಪಕ್ಷದಲ್ಲಿ ಹಲವಾರು ಯೋಜನೆಗಳನು ತರುವ ಮೂಲಕ ಬಯಲು ಸೀಮೆಯನ್ನು ಹಸಿರುಕರಣ ಮಾಡಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಅಂಬೇಡ್ಕರ್ ನಗರದಲ್ಲಿ ಮತಯಾಚನೆ ಮಾಡುವ ವೇಳೆ ಅಭಿಮಾನಿಯೊಬ್ಬರು ಬೃಹತ್ ಗಾತ್ರದ ಕೆಕ್ ನಲ್ಲಿ ಮತ್ತೆ ಶಾಸಕ ಟಿ.ರಘುಮೂರ್ತಿ ಹ್ಯಾಟ್ರಿಕ್ ಗೆಲುವು ಖಚಿತ ಎಂದು ಮತ್ತೆ 2023ಕ್ಕೆ ಶಾಸಕರು ಎಂದು ಕೆಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಇನ್ನೂ ಅಭಿಮಾನಿಗಳು ಸೇರಿ ಒಟ್ಟಾರೆ ಕಾಂಗ್ರೇಸ್ ಪಕ್ಷದ ಕೈ ಬಲಪಡಿಸಬೇಕು ಎಂದು ಕಂಕಣ ಬದ್ದರಾಗೋಣ ಎಂಬ ನಿಟ್ಟಿನಲ್ಲಿ ಶಾಸಕರು ಕೆಕ್ ಕತ್ತರಿಸಿ ಎಲ್ಲಾ ಕಾರ್ಯಕರ್ತರು ಮುಖಂರು ಸಿಹಿ ಹಂಚಿ ಸಂಭ್ರಮಿಸಿದರು.
ಅದರAತೆ ಹಾಲಿ ಶಾಸಕ ಟಿ.ರಘುಮೂರ್ತಿಯವರು ಈಡೀ ನಗರದಲ್ಲಿ ಭರ್ಜರಿಯಾಗಿ ಚುನಾವಣೆ ಪ್ರಚಾರದ ಮೂಲಕ ಅಭಿಮಾನಿಗಳನ್ನು ಕುರಿತು ಮಾತನಾಡಿದರು
ಇನ್ನೂ ನಗರದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಲಿ ಶಾಸಕರನ್ನು ಆತ್ಮೀಯವಾಗಿ ಸ್ವಾಗತ ಕೋರಿ ವಾರ್ಡ್ಗೆ ಆಹ್ವಾನ ಮಾಡುತ್ತಿದ್ದಾರೆ, ಆರಾತಿ ಬೆಳಗಿ, ಹೂವು ಮಾಲೆ ಹಾಕಿ ಸ್ವಾಗತ ಮಾಡಿಕೊಳ್ಳುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿವೆ.
ಇನ್ನೂ ಎಲ್ಲೆಡೆ ಮುಂಚೂಣಿಯಲ್ಲಿರುವ ಕೈ ನಾಯಕರ ದಂಡು ಈಡೀ ನಗರದಲ್ಲಿ ತುಂಬೆಲ್ಲ ಹರಿದಾಡುತ್ತಾ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರನಿಗೆ ಮನವಿ ಮಾಡಿಕೊಳ್ಳುವ ದೃಶ್ಯಗಳು ಕಾಣಸುಗುತ್ತಿವೆ. ಅದರಂತೆ ಹಾಲಿ ಶಾಸಕನಿಗೆ ಸಾಥ್ ನೀಡುವ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಶಶಿಧರ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯ ರಾಘವೇಂದ್ರ, ಮಲ್ಲಿಕಾರ್ಜುನಾ, ರಮೇಶ್ ಗೌಡ, ವಿರುಪಾಕ್ಷ, ಕವಿತಾ, ಸುಮಕ್ಕ, ಜಯಲಕ್ಷಿö್ಮ, ಚಳ್ಳಕೆರೆಪ್ಪ, ವೈ.ಪ್ರಕಾಶ್, ಜಿಪಂ.ಮಾಜಿ ಸದಸ್ಯ ಪ್ರಕಾಶ್ ಮೂರ್ತಿ, ವಿರೇಶ್, ಕರಿಬಸವ, ಕಾಂತರಾಜ್, ಸಿಟಿ ಶ್ರೀನಿವಾಸ್, ಹಾಯ್ಕಲ್ ಪ್ರಕಾಶ್, ಸಿದ್ದಾಪುರದ ಶೇಖರ್, ಕೃಷ್ಣಮೂರ್ತಿ, ಸೂರಿ, ಪಾಲಯ್ಯ, ವಿಶುಕುಮಾರ್, ನಗರಂಗೆರೆ ಮಂಜುನಾಥ್, ಮುಜೀಬ್, ರಕ್ಷಣಾ ವೇದಿಕೆ ಮಂಜುನಾಥ್, ಮಾರಣ್ಣ, ವೀರಭದ್ರಿ, ಆಂಜನೇಯ್, ಸರಸ್ಪತಿ, ಭಾಗ್ಯಮ್ಮ, ಉಷಾ, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!