ಚಳ್ಳಕೆರೆ : ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ಧರಾದ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಯಾಗಿ ಈಡೀ ಕ್ಷೇತ್ರದಲ್ಲಿ ಮನೆ ಮಾತಾಗಿರುವ ತಹಶಿಲ್ದಾರ್ ಎನ್.ರಘುಮೂರ್ತಿ ಕಾರ್ಯ ಶ್ಲಾಘನೀಯ ಎಂದು ತಾಲೂಕು ಬಜರಂಗದಳದ ಅಧ್ಯಕ್ಷ ಡಾಕ್ಟರ್ ಮಂಜುನಾಥ್ ಹೇಳಿದರು
ಅವರು ತಾಲೂಕು ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಹಾಗೂ ವಿಶ್ವ ಹಿಂದೂ ಮಹಾ ಗಣಪತಿ ಆಯೋಜನೆ ಸಮಿತಿ ಕಾರ್ಯಕರ್ತರೊಂದಿಗೆ ತಹಸಿಲ್ದಾರ್ ಎನ್ ರಘುಮೂರ್ತಿ ಅವರ ನಿವಾಸದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಳೆದ ವರ್ಷ ನಡೆದಂತಹ ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಈ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿ ಪ್ರತಿಯೊಂದು ಸಹಕಾರವನ್ನು ನೀಡಿದಂತ ತಹಶಿಲ್ದಾರ್ ಎನ್.ರಘುಮೂರ್ತಿ ಅವರ ಕಾರ್ಯ ಶ್ಲಾಘನೀಯ ಮತ್ತು ಅನನ್ಯವಾದದ್ದು ಭಾರತ ಧಾರ್ಮಿಕ ಪರಂಪರೆ ಮತ್ತು ಆಧ್ಯಾತ್ಮಿಕ ಇತಿಹಾಸಕ್ಕೆ ಸಾಕ್ಷಿಕರಿಸಿದಂತ ದೇಶ ಈ ದೇಶದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಗಳು ದೇವತಾ ಕಾರ್ಯಗಳು ಮತ್ತು ದೇಶ ಮತ್ತು ರಾಷ್ಟ್ರವನ್ನು ಪ್ರತಿಬಿಂಬಿಸುವAತಹ ಅನೇಕ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ, ನನ್ನ ದೇಶ ನನ್ನ ರಾಷ್ಟ್ರ ಎನ್ನುವ ಪರಿಕಲ್ಪನೆಯಲ್ಲಿ ಈ ಕಾರ್ಯಗಳಲ್ಲಿ ಭಾಗಿಯಾಗುವಂತ ಅಧಿಕಾರಿಗಳು ತುಂಬಾ ವಿರಳ ಎಂದರು.
ಇನ್ನೂ ಬಜರಂಗದಳದ ಮುಖಂಡರಾದ ಮಾತೃಶ್ರೀ ಮಂಜುನಾಥ್ ಮಾತನಾಡಿ, ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಮೊದಲನೇ ದಿನದಿಂದ ಶೋಭ ಯಾತ್ರೆಯವರೆಗೆ ನಿರಂತರವಾಗಿ ಕಾರ್ಯಕ್ರಮಕ್ಕೆ ತಮ್ಮ ಅಮೂಲ್ಯ ಸಹಕಾರವನ್ನು ನೀಡಿ ದೇವತಾ ಕಾರ್ಯಗಳಿಗೆ ತಮ್ಮ ಭಕ್ತಿಯ ಮೂಲಕ ಉದಾತ್ತವದಂತ ಕಾಣಿಕೆ ನೀಡಿದ್ದಾರೆ ಆದುದರಿಂದ ಇವರ ಈ ಸೇವೆಯನ್ನು ಗಮನದಲ್ಲಿಟ್ಟುಕೊಂಡು ತಾಲೂಕು ವಿಶ್ವಹಿಂದೂ ಪರಿಷತ್ ಭಜರಂಗದಳ ಮತ್ತು ವಿಶ್ವ ಹಿಂದೂ ಮಹಾ ಗಣಪತಿ ಸಮಿತಿಯಿಂದ ಶ್ರೀ ಕೃಷ್ಣನ ವಿಗ್ರಹವನ್ನು ನೀಡಿ ಇವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು ಎಂದರು.

ಭೋವಿ ಸಮಾಜದ ಮುಖಂಡರಾದ ಜಗದೀಶ್ ಮಾತನಾಡಿ, ಇನ್ನೂ ಮುಂದೆಯೂ ಇಂತಹ ಸತಕಾರ್ಯಗಳನ್ನು ಸಮಾಜದಲ್ಲಿ ಮಾಡುವಂತೆ ಇವರಿಗೆ ಶಕ್ತಿಯನ್ನು ಈ ವಿಘ್ನ ವಿನಾಯಕನು ನೀಡಲೆಂದು ಶುಭಾ ಹಾರೈಸಿದರು

ಈ ಸಮಾರಂಭದಲ್ಲಿ ವಿಶ್ವ ಹಿಂದೂ ಮಹಾಗಣಪತಿ ಸಮಿತಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರಾದ ಮಾತೃಶ್ರೀ ಮಂಜುನಾಥ್, ಯೋಗೇಶ್, ನಾಗೇಶ್, ಭೋವಿ ಸಮಾಜದ ಮುಖಂಡರಾದ ಜಗದೀಶ್, ಚಿದಾನಂದ, ಕಣ್ಣೀರಪ್ಪ, ಕೃಷ್ಣ, ರವಿ, ಮಹಾಂತೇಶ್, ಕರಿಬಸವ ಚೆನ್ನಯ್ಯ, ಸಿದ್ದು, ರಾಮು, ಓಬಣ್ಣ, ಮೀರಾಸಾಬಿಹಳ್ಳಿ ನಾಗರಾಜು, ಮಾರುತಿ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!