• ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಹೆಚ್ ಗಂಗಾಧರಪ್ಪ
    ನಾಯಕನಹಟ್ಟಿ:: ಮಧ್ಯಕರ್ನಾಟಕದ ಆರಾಧ್ಯದೈವ ಗುರು ತಿಪ್ಪೇರುದ್ರಸ್ವಾಮಿಯ
    ಹೂರ-
    ಮಠ ಒಳಮಠ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯ ಜಿಲ್ಲಾಧಿಕಾರಿ ಕವಿತ ಎಸ್.ಮನ್ನಿಕೇರಿ ತಹಶೀಲ್ದಾರ್ ಎನ್.ರಘುಮೂರ್ತಿ ಆದೇಶದಂತೆ ಗುಂಡಿ ಹೇಳಿಕೆ ಕಾರ್ಯ ನಡೆಯುತ್ತಿದೆ ಎಂದು ದೇವಾಲಯದ ಕಾರ್ಯನಿರ್ವಾಧಿಕಾರಿ ಎಚ್ ಗಂಗಾಧರಪ್ಪ ಹೇಳಿದ್ದಾರೆ.
    ಅವರು ಗುರುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೂರಮಠದ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ತಹಸಿಲ್ದಾರ್ ರವರ ಆದೇಶದಂತೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಹೊರಮಠದಲ್ಲಿ ಬೆಳಗ್ಗೆ 10 ಗಂಟೆಗೆ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದೆ ಪ್ರತಿ ಆರು ತಿಂಗಳಿಗೊಮ್ಮೆ ಹುಂಡಿ ಎಣಿಕೆ ಕಾರ್ಯ ನಡೆಸಲಾಗುವುದು
    ಇನ್ನು ಉಂಡಿ ಎಣಿಕೆ ಕಾರ್ಯವು ಪೊಲೀಸ್ ಇಲಾಖೆ ಕಂದಾಯ ಇಲಾಖೆಯ ಸಿಬ್ಬಂದಿಗಳ ಜೊತೆಗೂಡಿ ವಿಡಿಯೋ ಚಿತ್ರೀಕರಣದ ಮೂಲಕ ಉಂಡಿ ಎಣಿಕೆ ಕಾರ್ಯ ಆರಂಭಿಸಲಾಯಿತು ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ತಿಳಿಸಿದ್ದಾರೆ. ನಂತರ ಒಳಮಠದ ದೇವಸ್ಥಾನದಲ್ಲಿ ಇದ್ದ ಎಲ್ಲಾ ಹುಂಡಿಗಳನ್ನು ತೆರವು ಮಾಡಿ ಹುಂಡಿಗಳನ್ನು ಏಣಿಕೆ ಕಾರ್ಯ ಮಾಡಲಾಯುತು .
    ಇಂದು ದೇವಸ್ಥಾದಲ್ಲಿ ವಿಶೇಷ ಸಿಸಿ ಕ್ಯಾಮರ ಹಾಗೂ ವಿಡಿಯೋ ಚಿತ್ರಕರಣದ ಮೂಲಕ ಹುಂಡಿ ಹಣ ತೆರೆಯಲಾಯುತು ಹೊರಮಠ ಮೂತ್ತ 6 ಲಕ್ಷದ 92 ಸಾವಿರದ 92 ರೂಪಾಯಿ
    ಮತ್ತು ಒಳ ಮಠದ ಮೂತ್ತ 38 71,306. ಒಳ ಮಠ ಮತ್ತು ಹೂರಮಠದ ಒಟ್ಟು ಮೊತ್ತ 45,63,397
    ನಾಯಕನಹಟ್ಟಿ ಯಲ್ಲಿ ಜಾತ್ರೆ ಯಿಂದ ಇಲ್ಲಿಯವರಿಗೆ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
    ಕಾಣಿಕೆ ಹುಂಡಿಯಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪತ್ರಗಳ ಪತ್ರಗಳ ಬರೆದು ಪತ್ರಗಳನ್ನು ಹಾಕಲಾಗಿತ್ತು ಇದರ ಜೊತೆಗೆ ಬೆಳ್ಳಿ ಪಾದಕ್ಕೆ ತೊಟ್ಟಿಲು ಇತರೆ ಬೆಳ್ಳಿ ವಸ್ತುಗಳನ್ನು ಹುಂಡಿಯೊಳಗೆ ಹಾಕಿದ್ದರು ಪಾಪಿಯಿಂದ ಪಾಮರರ ಅಭಿಷ್ಟ ಗಳನ್ನು ಈಡೇರಿಸುವಂತಹ ಮಹಾದೈವ ಹಾಗೂ ಮಾಡಿದಷ್ಟು ನೀಡು ಭಿಕ್ಷೆ ನೀಡುವಂತಹ ಕರುಣಾಮಯಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ತಮ್ಮ ಅಭಿಷ್ಟ ಗಳನ್ನು ಹೊತ್ತ್ ಅಂತಹ ಅನೇಕ ಮನವಿಗಳು ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ ಹಲವಾರು ಭಕ್ತರು ಮದುವೆ ನೌಕರಿ ಆರ್ಥಿಕ ಸಂಕಷ್ಟ ಸಂತಾನ ಆರೋಗ್ಯ ಮುಂತಾದಂತಹ ಹಲವಾರು ಮನವಿಗಳನ್ನು ಕಾಣಿಕೆ ಹುಂಡಿಗೆ ಸಲ್ಲಿಸಿದ್ದಾರೆ ಇವರೆಲ್ಲರ ಅಭಿಷ್ಟ ಗಳನ್ನು ಈ ಮಹಾದೇವ ಈಡೇರಿಸುವನೆಂಬ ಆಶಾಭಾವನೆ ಭಕ್ತರಲ್ಲಿದೆ

ಈಸಂದರ್ಭದಲ್ಲಿ ತಾಲೂಕು ಕಚೇರಿಯ ಸಿರಿಸುದಾರರಾದ ಎಂ ಎಂ ಸದಾಶಿವಯ್ಯ, ಉಪ ತಹಶಿಲ್ದಾರರಾದ ಎಂ ಸುಧಾ, ರಾಜಸ್ವ ನಿರೀಕ್ಷಿಕ ಚೇತನ್ ಕುಮಾರ್, ತಳಕು ಆರ್ ಐ ತಿಪ್ಪೇಸ್ವಾಮಿ, ರೇಖಾ, ಸರ್ವ ಮಂಗಳಮ್ಮ, ದೇವಸ್ಥಾನ ಸಮಿತಿಯ ಸಿಬ್ಬಂದಿಗಳಾದ ಎಸ್ ಸತೀಶ್, ಬಿ ಸಿ ಮನು, ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳಾದ ಹರೀಶ್, ಜಗದೀಶ್, ಉಮಾ, ಪುಷ್ಪಲತಾ, ಶರಣಬಸಪ್ಪ, ಜೈರಾಮ್, ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಚನ್ನಬಸಪ್ಪ, ಗ್ರಾಮ ಸಹಾಯಕ ಓಬಣ್ಣ ಕುದಾಪುರ, ಮಂಜುನಾಥ್, ಹರೀಶ್ ತಿಮ್ಮಪ್ಪನಯ್ಯಹಳ್ಳಿ, ಕೆನರಾ ಬ್ಯಾಂಕ್ ಮೆನೇಜರ್ ಸೂರ್ಯದೇವನಾಯ್ಕ, ಸಿಬ್ಬಂದಿಗಳಾದ ನಲಗೇತನಹಟ್ಟಿ ಎಂ ಬಿ ವೆಂಕಟೇಶ್, ಕೆ ಬಿ ಪುರಂದರ, ಬಿ ಓಬಳೇಶ್ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!