ಚಳ್ಳಕೆರೆ :

12ನೇ ವರ್ಷದ ಶ್ರೀ ಸಾಯಿ ಗುರುಪೂರ್ಣಿಮೆ ಜಾತ್ರಾ ಮಹೋತ್ಸವಕ್ಕೆ ಪ್ರತೀ ವರ್ಷದಂತೆ ಈ ವರ್ಷವೂ ಸಹ ಚಳ್ಳಕೆರೆ ತಾಲೂಕಿನ ಪ್ರತಿ ಗ್ರಾಮಗಳನ್ನು ತಲುಪಿ ಬಾಬಾ ರವರ ಅತ್ಯಂತ ಪ್ರಿಯವಾದ “ಭಿಕ್ಷಾಟನೆ”ಯನ್ನು ಮಾಡುವುದರ ಮೂಲಕ ಭಕ್ತಾದಿಗಳು ಭಕ್ತಿಯಿಂದ ನೀಡುವ ದವಸ ಧಾನ್ಯಗಳನ್ನು ಹಾಗೂ ದೇಣಿಗೆಯನ್ನು ಸಂಗ್ರಹಿಸಿ ಬರುವ *”ಶ್ರೀ ಸಾಯಿ ರಥ” ವನ್ನು ಇಂದು ನಗರದ ಪಾವಗಡ ರಸ್ತೆಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ “ಶ್ರೀ ವಾಲ್ಮೀಕಿ ಹರ್ಷಾನಂದ ಮಹಾಸ್ವಾಮಿಗಳು” ದಾಸನಾಯಕನಹಟ್ಟಿ ಇವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಇದೇ ಸಂಧರ್ಭದಲ್ಲಿ ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ನ ಆಡಳಿತಮಂಡಳಿ ಯ ಬಿ. ಸಿ. ವೆಂಕಟೇಶ್ ಮೂರ್ತಿ, ಬಿ. ಸಿ. ಸತೀಶ್ ಕುಮಾರ್, ಕೆ. ಎಂ. ಜಗದೀಶ್, ಕಾರ್ತಿಕ್ ಎಸ್ ಮೂರ್ತಿ, ಹೇಮಾ ರೆಡ್ಡಿ, ರಾಘವೇಂದ್ರ, ರೇಣುಕಾಸ್ವಾಮಿ, ವಿಕಾಸ್, ಸಂಜಯ್, ಪ್ರೇಮ್ ವೀರಭದ್ರಪ್ಪ, ತಿಪ್ಪೇಸ್ವಾಮಿ,ಹಾಗೂ ಸಾಯಿ ರಥ ಚಾಲಕರಾದ ಸತೀಶ್, ನಾಗರಾಜ್ ಹಾಗೂ ಸಾಯಿ ಸದ್ಭಕ್ತರುಗಳು ಇದ್ದರು

About The Author

Namma Challakere Local News
error: Content is protected !!