ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಬದಲಾವಣೆ ಶಿಕ್ಷಣ ಭವಿಷ್ಯ ನಿರ್ಮಾಣ ಚಳ್ಳಕೆರೆ 2025-2026 ಸಾಲಿನ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದರು.
ಈ ಸಂದರ್ಭದಲ್ಲಿ , ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಗಳಮ್ಮ ರಂಗಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಾತಲಿಂಗಪ್ಪ ಪ್ರಭು ದ್ಯಾಮಲಾಂಬ ರೇಣುಕಮ್ಮ ಗೌರಮ್ಮ ವಿಜಯಮ್ಮ ಮುಖಂಡರಾದ ತಿಪ್ಪೇರುದ್ರಪ್ಪ ಶೇಖರಪ್ಪ ಮಂಜುನಾಥ ಗಿರಿಯಪ್ಪ ರಂಗಸ್ವಾಮಿ ನಾಗರಾಜು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ರವರು ಅಕ್ಷರ ದಾಸೋಹ ಸಂಯೋಜಕರಾದ ಮಂಜುನಾಥ ಬಿ ಆರ್ ಸಿ ನಾಗರಾಜು ಮತ್ತು ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

