ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಚರಂಡಿ ಹೂಳು ತೆಗೆದು
ಸ್ವಚ್ಛಗೊಳಿಸಿದ್ದಾರೆ.

ಚಳ್ಳಕೆರೆ ನ್ಯೂಸ್ :

ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದ ಸಮೀಪ
ಚಿತ್ರದುರ್ಗ ರಸ್ತೆ ಮಾರ್ಗದ ಖಾಸಗಿ ಹೋಟೆಲ್ ಸಮೀಪ
ಚರಂಡಿ ಹೂಳು ತೆಗೆಯಲು ಮುಂದಾದ ನಗರಸಭೆ ಪೌರ ಕಾರ್ಮಿಕರು.

ಹೌದು ಕಳೆದ ಹಲವು ವರ್ಷಗಳಿಂದ
ಚರಂಡಿಗಳು ಹೂಳು ತುಂಬಿದ್ದು ಮಳೆ ಬಂದಾಗ ಚರಂಡಿ ನೀರು
ಮನೆಗೆ ನುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ಮನಗಂಡ
ನಗರಸಭೆ ಅಧಿಕಾರಿಗಳು ಪೌರ ಕಾರ್ಮಿಕರ ಮೂಲಕ ಚರಂಡಿಯ
ಹೂಳು ತೆಗೆಯಲು ಮುಂದಾಗಿದೆ.

ನಗರದ ಚಂಡಿಗಳಲ್ಲಿ ಪ್ಲಾಸ್ಟಿಕ್
ಬಾಟಲಿಗಳು ಅನುಪಯುಕ್ತ ವಸ್ತುಗಳು ಶೇಖರಣೆಯಾಗಿದ್ದು
ಇದರಿಂದಾಗಿ ಮಳೆ ಬಂದಾಗ ಚರಂಡಿಗಳು ಕಟ್ಟಿಕೊಂಡು
ಮನೆಗಳಿಗೆ ಅಥವಾ ರಸ್ತೆಗಳಿಗೆ ನೀರು ನುಗ್ಗುವಂತಹ ಪರಿಸ್ಥಿತಿ ಇತ್ತು.

ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಚರಂಡಿ ಹೂಳು ತೆಗೆದು
ಸ್ವಚ್ಛಗೊಳಿಸಿದ್ದಾರೆ.

Namma Challakere Local News

You missed

error: Content is protected !!