ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಿಂದ ವಾಸವಿ ಮಹಲ್ ವರೆಗೆ ನಡೆದ ಮಡಿವಾಳ ಮಾಚಿದೇವ ಜನ ಜಾಗೃತಿ ಸಮಾವೇಶ ದ ಮೆರವಣಿಗೆಗೆ ಚಾಲನೆ ನೀಡಿದರು.

ತಾಲ್ಲೂಕು ಮಡಿವಾಳ ಸಂಘ, ತಾಲ್ಲೂಕು ಮಡಿವಾಳ ಯುವಕ ಸಂಘ, ಮಡಿವಾಳ ಸರ್ಕಾರಿ ನೌಕರರ ಸಂಘ, ಮಡಿವಾಳ ಮಹಿಳಾ ಸಂಘ, ಬಸವ ಮಡಿವಾಳ ಯುವ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಿಂದ ವಾಸವಿ ಮಹಲ್ ವರೆಗೆ ಶ್ರೀ ಶ್ರೀ ಡಾ. ಬಸವ ಮಡಿವಾಳ ಮಾಚಿದೇವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಶ್ರೀ ಮಡಿವಾಳ ಮಾಚಿದೇವ ಜನ ಜಾಗೃತಿ ಸಮಾವೇಶದ ಮೆರವಣಿಗೆಗೆ ಚಾಲನೆ ನೀಡಿ ಪುಜ್ಯಾ ಸ್ವಾಮೀಜಿಯವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮಡಿವಾಳ ಸಂಘದ ಅಧ್ಯಕ್ಷರಾದ ನಾಗರಾಜ್, ಗೌರವ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಕುಶಾಲಪ್ಪ, ಉಪಾಧ್ಯಕ್ಷರಾದ ಪುಟ್ಟಲಿಂಗಪ್ಪ, ಖಜಾಂಚಿ ಪ್ರಕಾಶ್, ನಾಗರಾಜ್ ಕರೀಕೆರೆ, ನಗರಸಭೆ ಸದಸ್ಯರಾದ ರಮೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ಮುಖಂಡರುಗಳಾದ ಬಡಗಿ ಪಾಪಣ್ಣ, ಸಿ.ಟಿ.ಶ್ರೀನಿವಾಸ್, ಮೈನಬಾಬು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.

Namma Challakere Local News
error: Content is protected !!