ಚಳ್ಳಕೆರೆ : ಇತಿಹಾಸವನ್ನು ಕೆದರಿದಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಆದರ್ಶವ್ಯಕ್ತಿಗಳು ಕಂಡು ಬರುತ್ತಾರೆ ಅವರ ಆದರ್ಶಗುಣಗಳ ಸವಿಯಲು ಅವರ ಹೆಸರಿನಲ್ಲಿ ಜಯಂತಿಗಳನ್ನು ಆಚರಣೆ ಮಾಡುತ್ತೇವೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ರಾಷ್ಟಿçÃಯ ಹಬ್ಬಗಳ ಆಚಾರಣಾ ಸಮಿತಿ, ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರದಲ್ಲಿ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ 536ನೇ ಕನಕಜಯಂತ್ಸೋವಕಾರ್ಯಕ್ರಮ ಹಾಗೂ ಶ್ರೀ ಕನಕದಾಸರ ವೃತ್ತದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಸಮಾಜದ ಅಂಕುಡೊAಕುಗಳನ್ನು ಕೀರ್ತನೆಗಳ ಮೂಲಕ ತಿದ್ದಿದ ಕೀರ್ತನಕಾರರಾದ ಕನಕದಾಸರು, ಪುರಂದರದಾಸರು, ಬಸವಣ್ಣ, ಬುದ್ದ ಇತರ ಮಹಾನ್ ವ್ಯಕ್ತಿಗಳು ಮಾನವೀಯ ಮೌಲ್ಯ ಹಾಗೂ ನೈತಿಕ ಶಿಕ್ಷಣವನ್ನು ಜಗತ್ತಿಗೆ ಸಾರಿದ ಯುಗಪುರುಷರಾಗಿದ್ದಾರೆ, ರಾಜ್ಯದಲ್ಲಿ ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಲುಮತದ ಸಮಾಜ ಯಾವ ರೀತಿಬೆಂಬಲ ನೀಡುತ್ತಿದ್ದೆಯೋ ಅದೇ ರೀತಿಯಲ್ಲಿ ಕಳೆದ ಮೂರು ಬಾರಿ ಶಾಸಕನಾಗಲು ಈ ಸಮಾಜ ಶ್ರಮಿಸಿದೆ ನಿಮ್ಮ ಈ ಋಣ ಮುಂದಿನ ದಿನಗಳಲ್ಲಿ ತೀರಿಸುವೆ, ಈಗೀರುವ ಕನಕ ಭವನವನ್ನು ಸಂಪೂರ್ಣವಾಗಿ ಪೂರೈಸಲಾಗುವುದು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ ಮಾತನಾಡಿ, ಕೇವಲ ಕಿರ್ತನೆಗಳ ಮೂಲಕ ಈಡೀ ನಾಡಿನಲ್ಲಿ ಕುರುಬ ಸಮಾಜದ ಹರಿಕಾರನಾದ ಕನಕದಾಸರು ಶೋಷಿತ ಹಿಂದುಳಿದ ವರ್ಗಗಳ ಸಮುದಾಯಗಳು ಮೇಲತ್ತುವ ಕಾರ್ಯದಲ್ಲಿ ತೊಡಗಿದ್ದಾರೆ, ಇಂದಿನ ಆಧುನಿಕ ಕಾಲದಲ್ಲಿ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಈಡೀ ತಾಲೂಕಿನಲ್ಲಿ ಕುರುಬ ಸಮಾಜವನ್ನು ಗುರುತಿಸುವ ಮೂಲಕ ನಮ್ಮ ಸಮಾಜಕ್ಕೆ ರಾಜಾಕೀಯ,ಸಾಮಾಜಿಕ ನ್ಯಾಯ ದೊರಕಿಸುವ ಮೂಲಕ ಸಮುದಾಯಕ್ಕೆ ಕನಕ ಭವನ, ಸ್ತಿçÃಯರ ಸಾಂಸ್ಕೃತಿಕ ಭವನ, ಕನಕದಾಸರ ವೃತ್ತ ಈಗೇ ಇಡೀ ಸಾಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಸAಘದ ಅಧ್ಯಕ್ಷ ಆರ್.ಮಲ್ಲೆಶಪ್ಪ ಮಾತನಾಡಿ ಭಾರತ ಇತಿಹಾಸ ಪುಟಗಳನ್ನು ಕೆದಕಿದಾಗ ಅನೇಕ ಸಂತರು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಸರಕಾರಿ ಜಯಂತಿಗಳು ಅರ್ಥಪೂರ್ಣವಾಗಿ ಆಚರಣೆ ಮಾಡಿದಾಗ ಮಾತ್ರ ಮಹಾನ್ ದಾಸರ ಕೊಡುಗೆಗೆ ಸಾರ್ಧಕವಾಗುತ್ತದೆ ಎಂದ ಅವರು ಜ್ಞಾನ ಯಾವ ವರ್ಗಕ್ಕೆ, ಜಾತಿಗೆ ಸೀಮಿತವಾಗಿಲ್ಲ ಜಾತಿ, ಧರ್ಮಗಳಿಂದ ಆಗದ ಕೆಲಸ ದೈವದಿಂದ ಆಗುತ್ತದೆ ಎಂದು ತೋರಿಸಿಕೊಟ್ಟವರಲ್ಲಿ ಕನಕದಾಸರು ಎಂದು ತಿಳಿಸಿದರು.

ಪ್ರಾಂಶುಪಾಲರಾದ ಎಂ.ಶಿವಲಿAಗಪ್ಪ, ಅರುಣ್, ಕನದಾಸರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಮೊದಲು ಚಿತ್ರದುರ್ಗ ರಸ್ತೆಯ ಕನಕ ಕಾಂಪ್ಲೆಕ್ಸ್ ಮುಂಬಾಗ ಕನಕದಾಸರ ವೃತ್ತದ ನಾಮಕಾರಣ ಹಾಗೂ ಭೂಮಿ ಪೂಜೆ ಸಲ್ಲಿಸಿ ನಗರದ ಪ್ರಮುಖ ರಸ್ತೆಯಯಲ್ಲಿ ಗೊರವನ ಕುಣಿತ, ಹಾಗೂ ವಿವಿಧ ಕಲಾತಂಡಗಳೊAದಿಗೆ ಎಂ.ಜೆ.ರಾಘವೇAದ್ರ, ಹಾಗೂ ಎಂ.ಜೆ.ಕುಮಾರ್ ಸಾರಥ್ಯದ ಡಿಜೆ.ಸೌಂಡ್ಸ್ ನೊಂದಿಗೆ ಮೆರವಣಿಗೆ ನೆಡೆಸಿ ನಂತರ ರೇವಣ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ವೇಧಿಕೆಯತ್ತ ಮೆರವಣಿಗೆ ಸಾಗಿತು.

ಹೇಳಿಕೆ :
ಕಳೆದ ಹಲವು ವರ್ಷಗಳಿಂದ ಅಹಲ್ಯಾ ಬಾಯಿ ಹೋಳ್ಕರ್ ಸಂಘದ ಮಹಿಳೆಯರು ತಮ್ಮ ಸಾಂಸ್ಕೃತಿಕ ಭವನ ಇಲ್ಲದೆ ಇರವು ಕಾರಣ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿರವರಿಗೆ ನಗಸರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ ಬೇಟಿಕೆ ಇಟ್ಟ ಕಾರಣ ಸ್ಥಳದಲ್ಲೆ ಶಾಸಕರು ಸು.10ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ಕಟ್ಟಲು ಸೂಚಿಸಿದರು. ಸ್ಥಳದಲ್ಲೆ ನೆರೆದಿದ ಮಹಿಳೆಯರ ನಗೆಹೊನಲು ಹೊರಚಿಮ್ಮಿ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಈದೇ ಸಂಧರ್ಭದಲ್ಲಿ ಮಾಜಿ ಜಿಪಂ.ಅಧ್ಯಕ್ಷರಾದ ಶಶಿಕಲಾ ಕಂದಿಕೆರೆ ಸುರೇಶ್‌ಬಾಬು, ನಗರಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಸಂಘದ ಅಧ್ಯಕ್ಷ ಆರ್.ಮಲ್ಲೆಶಪ್ಪ, ಸದಸ್ಯ ಕೆ.ವೀರಭದ್ರಯ್ಯ, ರಮೇಶ್ ಗೌಡ, ಸಿಡಿಸಿ ಬ್ಯಾಂಕ್ ನಿದೇರ್ಶಕ ಸೂರನಹಳ್ಳಿ ಕೆ.ಜಗದೀಶ್, ರುದ್ರಮುನಿ,ನಾಗವೆಣಿ, ರಾಧಮ್ಮ, ಮಹಾಲಿಂಗಪ್ಪ, ತಹಶೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಶಶಿಧರ್, ಬಿಇಒ.ಕೆ.ಎಸ್.ಸುರೇಶ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಅಕ್ಷರದಾಸೋಹ ತಿಪ್ಪೆಸ್ವಾಮಿ, ಬಿಸಿಎಂ ಅಧಿಕಾರಿ ದಿವಾಕರ್, ಸಿಡಿಪಿಓ ಹರಿಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಅದಿಕಾರಿ ಮಂಜುನಾಥ್, ಡಿವೈಎಸ್‌ಪಿ ರಾಜಣ್ಣ, ಪಿಎಸ್‌ಐ ಸತೀಶ್‌ನಾಯ್ಕ ಇತರರಿದ್ದರು.


ಫೋಟೊ1. ಚಳ್ಳಕೆರೆ ನಗರದ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿವತಿಯಿಂದ 536 ನೇ ಜಂತೋತ್ಸವ ಕಾರ್ಯಕ್ರವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.
2.ಚಿತ್ರದುರ್ಗ ರಸ್ತೆಯಲ್ಲಿ ಶ್ರೀ ಕನಕದಾಸರ ವೃತ್ತವನ್ನು ನಾಮಕಾರಣ ಮಾಡಿ, ವೃತ್ತದ ಭೂಮಿ ಪೂಜೆ ನೆರೆಸಿದ ಶಾಸಕ ಟಿ.ರಘುಮೂರ್ತಿ

.3. ಚಳ್ಳಕೆರೆ ನಗರದ ಕನಕ ದಾಸರ ಜಯಂತೋತ್ಸವದಲ್ಲಿ ಗೊರವಗಳ ಕುಣಿತ,

Namma Challakere Local News
error: Content is protected !!