“ಮಕ್ಕಳಿಂದ ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ ಪಠಣ” ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ಅವರ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ ಮತ್ತು ಚೈತನ್ಯದಾಯಕ ನುಡಿಗಳ ಪಠಣ, ರಶ್ಮಿ ವಿನಯ್ ಅವರಿಂದ ಗೋವಿಂದನ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ವಿವಿಧ ಆಟಗಳನ್ನು ಸಂತೋಷ್ ಕುಮಾರ್ ಆಡಿಸಿದರು. ಶಿಬಿರದಲ್ಲಿ ಸುಧಾಮಣಿ,ಬಿಂದು, ಸಂಜನಾ,ಹಂಸ, ಮಹಾಲಕ್ಷ್ಮೀ, ಹರ್ಷಿತಾ, ಯಶಸ್ವಿ,ಲಕ್ಷ್ಮೀ,ವಿವಿಕ್ತ, ವಿಷ್ಣು,ಸಾಯಿ ಸಮರ್ಥ್, ಶ್ರೇಯಸ್ಸು,ವಿನತಿ, ಪ್ರಣಾಮ್ಯ, ನಮ್ರತಾ, ಜಶ್ವಿತಾ,ಕೋಮಲಾಸಿರಿ, ವೈಷ್ಣವಿ,ಚರಣ್ಯ, ಗಾಯನಾ, ಶ್ಯಾಮ್,ಮನಸಿರಿ, ಶ್ರೀನಿಹಾಂತ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಮಕ್ಕಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!