ಚಳ್ಳಕೆರೆ : ಸರಕಾರಿ ವಾಹನ ದುರ್ಬಳಕೆ ,
ಹೌದು ಮೊಳಕಾಲ್ಮೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಪ್ರಕಾಶ್ ರವರು ತಮ್ಮ ಸರಕಾರಿ ವಾಹನದಲ್ಲಿ ನೂರಾರು ಸೀರೆಗಳನ್ನು ತುಂಬಿಕೊಂಡು ಚಳ್ಳಕೆರೆ ನಗರದ ಪ್ರವಾಸಿ ಮಂದಿರಕ್ಕೆ ಬಂದಿರುವ ಘಟನೆ ಜರುಗಿದೆ.
ಕೇಂದ್ರ ತಂಡ ಆಗಮಿಸುವ ಹಿನ್ನಲೆಯಲ್ಲಿ ಮೇಲಾಧಿಕಾರಿಗಳಿಗೆ ಮೊಳಕಾಲ್ಮೂರಿನ ರೇಷ್ಮೆ ಸೀರೆ ನೀಡುವ ಸಲುವಾಗಿ ನೂರಾರು ಸೀರೆಗಳನ್ನು ಸರಕಾರಿ ವಾಹನದಲ್ಲಿ ತುಂಬಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಇನ್ನೂ ಮಾಧ್ಯಮದ ಪ್ರಶ್ನೆಗೆ ತಡವರಿಸಿದ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ರವರು ಮೇಲಾಧಿಕಾರಿಗಳಿಗೆ ಸೀರೆ ನೀಡುವ ಸಲುವಾಗಿ ಚಳ್ಳಕೆರೆ ನಗರದ ಪ್ರವಾಸಿ ಮಂದಿರಕ್ಕೆ ತರಲಾಗಿದೆ ಎಂದಿದ್ದಾರೆ.


