ಚಳ್ಳಕೆರೆ :
ಚಿತ್ರದುರ್ಗ: ಉದ್ಯೋಗವಿಲ್ಲದೆ ಯುವಕರು ಅಪರಾಧ
ಕೃತ್ಯಕ್ಕಿಳಿಯುತ್ತಿದ್ದಾರೆ
ಸರ್ಕಾರ ನಿರುದ್ಯೋಗಿಗಳಿಗೆ ಕೆಲಸ ನೀಡುತ್ತಿಲ್ಲ, ಇದರಿಂದಾಗಿ
ಯುವಕರು ಅಪರಾಧದ ಹಾದಿ ಹಿಡಿಯುತ್ತಿದ್ದಾರೆ ಎಂದು ವಕೀಲ
ಪ್ರತಾಪ್ ಜೋಗಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ. ರಾಜ್ಯ ಹಾಗೂ
ಕೇಂದ್ರ ಸರ್ಕಾರಗಳು ಉದ್ಯೋಗ ಸೃಷ್ಟಿಸುವುದಾಗಿ ಹೇಳುತ್ತವೆಯೇ
ಹೊರತು, ಆಚರಣೆಯಲ್ಲಿ ತರುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿ
ನೇಮಕಗೊಂಡವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ
ನೀಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

