ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಅದ್ದೂರಿ ಶ್ರೀ ಕೃಷ್ಣಾಜನ್ಮಾಷ್ಠಮಿ : ಶಾಸಕ ಟಿ.ರಘುಮೂರ್ತಿ ಬಾಗಿ
ಚಳ್ಳಕೆರೆ : ಕಳೆದ ಒಂದು ವಾರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಠಾಮಿ ಅಂಗವಾಗಿ ಯಾದವ ಮುಖಂಡರು ಅರ್ಥಗರ್ಭಿತವಾಗಿ ಅದ್ದೂರಿಯಾಗಿ ಕೃಷ್ಣಾನ ಭಾವಚಿತ್ರ ಮೆರವಣಿಗೆ ಮಾಡುವ ಮೂಲಕ ಕೃಷ್ಣನಿಗೆ ಪಾತ್ರರಾಗಿದ್ದಾರೆ.


ಅದರಂತೆ ಇಂದು ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಷ್ಟಮಿ ಜಯಂತಿ ಅಂಗವಾಗಿ ಗ್ರಾಮದ ಯಾದವ ಮುಖಂಡರು ಆಯೋಜಿಸಿದ್ದ ಶ್ರಿ ಕೃಷ್ಣನ ರಥೋತ್ಸವದಲ್ಲಿ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಪಾಲ್ಗೊಂಡು, ಶ್ರೀ ಕೃಷ್ಣನ ಕೈಪೆಗೆ ಪಾತ್ರರಾದರು.
ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿಕುಮಾರ್ ಮತ್ತು ಗ್ರಾಮ ಪಂಚಾಯತಿ ಸದಸ್ಯ ನವೀನ್ ಮತ್ತು ಸಾರ್ವಜನಿಕರು ಮುಖಂಡರು ಹಾಜರಿದ್ದರು

Namma Challakere Local News
error: Content is protected !!