ಬಯಲು ಸೀಮೆ ಹಸಿರುಕರಣಕ್ಕೆ ಕೋಟಿ ವೃಕ್ಷ ಸಂವರ್ಧನಾ ಅಭಿಯಾನದಲ್ಲಿ ಸುಮಾರು 1501 ಎಕರೆ ಪ್ರದೇಶ ಅಭಿವೃದ್ದಿ : ರಾಜಯೋಗ ಆಶ್ರಮದ ಶ್ರೀ ದೇನಾಭಗತ್ ಗುರೂಜೀ

ಚಳ್ಳಕೆರೆ : ಕಳೆದ 2021ರಿಂದ ನಿರಂತರವಾಗಿ ಕೋಟಿ ವೃಕ್ಷ ಸಂವರ್ಧನಾ ಅಭಿಯಾನದಲ್ಲಿ ಸುಮಾರು 1501 ಎಕರೆ ಪ್ರದೇಶವನ್ನು ಅಭಿವೃದ್ದಿ ಪಡಿಸುತ್ತಾ ಬಂದಿದ್ದೆವೆ, ಆದರೆ ಕೆಲವರು ಸುಖಾ ಸುಮ್ಮನೇ ಆರೋಪ ಅಪಾಧನೆ ಸರಿಯಲ್ಲ ತಾಲೂಕಿನಲ್ಲಿ ಎಲ್ಲಾರು ಈ ಬಯಲು ಸೀಮೆ ಹಸಿರುಕರಣಕ್ಕೆ ಕಂಕಣ ಬದ್ದರಾಗೋಣ ಎಂದು ರಾಜಯೋಗ ಆಶ್ರಮದ ಶ್ರೀ ದೇನಾಭಗತ್ ಗುರೂಜೀ ಕರೆ ನೀಡಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರಲ್ಲಿ ಆಯೋಜಿಸಿದ್ದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದರು, ಪ್ರಸ್ತುತ ಇಲ್ಲಿಯವರೆಗೆ ಸು.ಒಂದು ಲಕ್ಷ ಸಸಿಗಳನ್ನು ನಿರಂತರವಾಗಿ ಬೆಳೆಸುವ ಮೂಲಕ ಪರಿಸರ ಸಮತೋಲಕ್ಕೆ ಬದ್ದರಾಗಿದ್ದೆವೆ. ಈ ಅಮೃತ ಕಾವಲಿನಲ್ಲಿ ನೂರಾರು ಜಾತಿಯ ಗಿಡಗಳ ಜೊತೆಗೆ ಸುಮಾರು 25 ಜಾತಿಯ ವಿಧವೇ ತರಹ ಸಸಿಗಳನ್ನು ನೆಡಲಾಗಿದೆ, ಅಂತರ್ಜಾಲ ವೃದ್ದಿಗೆ ಹಿಂಗು ಗುಂಡಿಗಳನ್ನು ಮಾಡಲಾಗಿದೆ, ನೀರಿನ ತಡೆಗಾಗಿ ಚೆಕ್ ಡ್ಯಾಂಗಳನ್ನು ಅಭಿವೃದ್ದಿ ಮಾಡಲಾಗಿದೆ, ಈ ಭೂಮಿಯನ್ನು ರಾಜ್ಯಪಾಲರ ಅಂಕಿತದಿAದ ಹಸಿರುಕಣಕ್ಕಾಗಿ ನಮ್ಮ ಟ್ರಸ್ಟ್ಗೆ ನೀಡಲಾಗಿದೆ, ಬೆಂಗಳೂರಿನ ಎರಡು ಪ್ರತಿಷ್ಠಿತ ಪೌಂಡೇಶನ್ ನಿಂದ ಸಿಎಸ್‌ಆರ್ ಪಂಡ್ ನಿಂದ ಅಭಿವೃದ್ದಿಗೆ ಅನುದಾನ ಬರುತ್ತಿದೆ, ಇಲ್ಲಿಯವರೆಗೆ ಸಸಿಗಳ ಸರಂಕ್ಷಣೆಗೆ ಸು.33 ಸಾವಿರದ 11 ಲಕ್ಷ ವಚ್ಚದಲ್ಲಿ ಟ್ಯಾಂಕರ್ ನೀರು ಹೊದಗಿಸಿದೆ.
ಮುಂದಿನ ಆಗಸ್ಟ್ ಮಾಸದಲ್ಲಿ ರೋಟರಿ ಹಾಗೂ ಕೆ.ಎಂ.ಎಪ್ ಸಹಯೋಗದಲ್ಲಿ ಕಾಮದೇನು ಯೋಜನೆಯನ್ನು ನೀಡಲಾಗುತ್ತದೆ, ಪ್ರತಿ ಕುಟುಂಬಕ್ಕೆ ಒಂದು ಹಸು ನೀಡುವ ಮಹತ್ವದ ಕಾರ್ಯ ನಡೆಯುತ್ತದೆ, ಎಂದರು.

Namma Challakere Local News
error: Content is protected !!