ಚಳ್ಳಕೆರೆ ನ್ಯೂಸ್ :

ದೇಶದ ಪ್ರಧಾನ ಮಂತ್ರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಜಿಎಸ್ .ಮಂಜುನಾಥ್ ಇವರನ್ನು ತಕ್ಷಣ ರಾಜ್ಯಕಾರ್ಮಿಕ ಮಂಡಳಿ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು , ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಮಾನಸಿಕ ಅಸ್ವತ್ಥತೆಯನ್ನು ಇವರ ಹೇಳಿಕೆ ವ್ಯಕ್ತಪಡಿಸುತ್ತದೆ.

ಈ ಕೂಡಲೇ ದೇಶದ ಪ್ರಧಾನ ಮಂತ್ರಿಗಳ ವಿರುದ್ಧ ಆಸಂವಿಧಾನಿಕ ಪದಗಳನ್ನು ಬಳಸಿರುವ ಮಂಜುನಾಥ್ ಇವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಳ್ಳಕೆರೆ ಬಿಜೆಪಿ ಮುಖಂಡರಾದ ಪಟೇಲ್ ಕೆಬಿ ಕೃಷ್ಣೇಗೌಡ ಇವರು ಒತ್ತಾಯಿಸಿರುತ್ತಾರೆ

Namma Challakere Local News
error: Content is protected !!