ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ ಕೆ. ಆರ್. ಹಳ್ಳಿ ಗೇಟ್ ಬಳಿ ಭೀಕರ ಅಪಘಾತದ ಸಂಭವಿಸಿದೆ.
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಚ್ಚರ್ ಲಾರಿ ಅಪಘಾತಕ್ಕೆ ಒಳಗಾಗಿದೆ. ಇನ್ನೂ ಈ ಲಾರಿಯು ಮಹಾರಾಷ್ಟ್ರದಿಂದ ಕೋಲಾರದ ಕಡೆಗೆ , ದನಗಳನ್ನು ತುಂಬಿಕೊಂಡು ಹೋಗುವಾಗ , ಮತ್ತೊಂದು ಲಾರಿ ಎದುರಿಗೆ ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ, ಲಾರಿಯಲ್ಲಿದ್ದ 10 ದನಗಳ ಪೈಕಿ 7 ದನಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ 2 ದನಗಳಿಗೆ ಗಂಭೀರ ಗಾಯವಾಗಿದೆ. ಉಳಿದ 1 ದನ ಮಾತ್ರ ಕ್ಷೇಮವಾಗಿದೆ ಎಂದು ತಿಳಿದು ಬಂದಿದೆ.

ಎರಡು ಲಾರಿಗಳು ಅಪಘಾತವಾದ ರಭಸಕ್ಕೆ ಲಾರಿಯಲ್ಲಿದ್ದ ದನಗಳು ಚೆಲ್ಲಾಪಿಲ್ಲಿಯಾಗಿ ರೋಡಿಗೆ ಬಿದ್ದಿವೆ.
ಡ್ರೈವರ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Namma Challakere Local News
error: Content is protected !!