ಚಳ್ಳಕೆರೆ : ನಮ್ಮ ತಂದೆ ಮಾಡಿದ ಸೇವೆ ಈಡೀ ಕ್ಷೇತ್ರದಲ್ಲಿ ಜನರ ಮನಸ್ಸಲ್ಲಿ ಉಳಿದಿದೆ ಆದ್ದರಿಂದ ಈ ಬಾರಿ ಅವರ ಋಣ ತೀರಿಸುವ ಕೆಲಸ ಹಾಗುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಹೇಳಿದ್ದಾರೆ

ಅವರು ಕ್ಷೇತ್ರದ ನನ್ನಿವಾಳ ಪಂಚಾಯತ ವ್ಯಾಪ್ತಿಯ ಅಲವು ಹಟ್ಟಿಗಳಿಗೆ ತೆರಳಿ ಮತಯಾಚನೆ ನಡೆಸಿ ಮಾತನಾಡಿದರು

ಇನ್ನೂ ರಾಜಕೀಯ ಪಕ್ಷಗಳನ್ನು ನೋಡಿದ ಜನತೆ ಈ ಬಾರಿ‌ ಸಂಪೂರ್ಣವಾಗಿ ಬದಲಾವಣೆ ಬಯಸುತ್ತಿದ್ದಾರೆ ಆದ್ದರಿಂದ ಗೆಲುವು ನಿಶ್ಚಿತ, ಯಾವುದೇ ವದಂತಿಗಳಿಗೆ ಕಿವಿಗೊಡದೆ ಚುನಾವಣೆ ಸಂಧರ್ಭದಲ್ಲಿ ನಮ್ಮ ಪರ ಕೆಲ‌ಕಿಡಿಗೇಡಿಗಳು ಅಪ ಪ್ರಚಾರ ಮಾಡುವುದು ವಾಡಿಕೆಯಾಗಿದೆ ಆದ್ದರಿಂದ ಮತದಾರ ಪ್ರಭುಗಳು ನೀವೇ ನಮಗೆ ಹೈ ಕಾಮಂಡ್ ಆದ್ದರಿಂದ ನಿವೇ ನಿಮ್ಮ ಮಗನನ್ನು ವಿಧಾನ ಸೌದಕ್ಕೆ‌ಕಳಿಸಿಕೊಡುವುದು ನಿಮ್ಮ‌ ಜವಾಬ್ದಾರಿ ಎಂದರು.

ನಿವೃತ್ತ ತಹಶಿಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಕ್ಷೇತ್ರದ ಜನರು ಮಾಜಿ‌ ಸಚಿವ ರ ಮೇಲೆ ಇಟ್ಟಿರಿವ ಪ್ರೀತಿ ವಿಶ್ವಾಸ ನೋಡಿದರೆ ಸುಮಾರು ಇಪ್ಪತ್ತು ಸಾವಿರ ಲೀಡ್ ನಲ್ಲಿ ಗೆಲುವು ನಿಶ್ಚಿತ , ಕುರುಬ ಜನಾಂಗ ಕುರಿಮರಿಯನ್ನು ಅಭಿಮಾನಕ್ಕೆ‌ ಕೊಟ್ಟಿರುವುದು ಮತಗಳನ್ನು ಕೊಡುವು ಮುನ್ಸೂಚನೆ ಕಾಣುತ್ತಿದೆ

ಈಗೇ ಕ್ಷೇತ್ರದಲ್ಲಿ ಅನುಕಂಪದ ಅಲೆ ಎದ್ದಿದ್ದೆ ಇದನ್ನು ಯಾರಿಂದ ತಡೆಯಲು ಸಾಧ್ಯವಿಲ್ಲ ಎಂದರು

ಚುನಾವಣೆಗೆ ಇನ್ನೂ ಕೇವಲ 5 ದಿನ ಮಾತ್ರ ಬಾಕಿ ಉಳಿದಿರುವಾಗಲೇ ರಾಜ್ಯದಲ್ಲಿ ಚುನಾವಣೆ ಕಣ ಭರ್ಜರಿಯಾಗಿ ರಂಗೇರಿದೆ
ಅದರAತೆ ಕಾಂಗ್ರೇಸ್ ಭದ್ರಾ ಕೋಟೆಯಂತಿರುವ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಭದ್ರಾ ಕೋಟೆಯನ್ನು ಬೇಧಿಸಲು ಪಕ್ಷೇತರ ಅಭ್ಯರ್ಥಿ ಇನ್ನಿಲ್ಲದ ಕಸರತು ಮಾಡುವ ಮೂಲಕ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ
ಇನ್ನೂ ಕ್ಷೇತರ ಅಭ್ಯರ್ಥಿ ಕೆ,ಟಿ.ಕುಮಾರಸ್ವಾಮಿ ಮತಯಾಚನೆಗೆ ಹೋದ ಸಂಭರ್ಧದಲ್ಲಿ ಕುರಿಮರಿಯನ್ನು ಕೊಡುಗೆಯಾಗಿ ಕೊಟ್ಟು ನಾವು ನಿಮ್ಮ ಬೆಂಬಲಕ್ಕೆ ಇದ್ದೆವೆ ಎಂಬ ಸಂದೇಶ ಕೂಡ ಮತದಾರರು ನೀಡುತ್ತಾರೆ
ಇನ್ನೂ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುವ ಕುಮಾರಸ್ವಾಮಿಗೆ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಸ್ಟಾರ್ ಕ್ಯಾಂಪೇನ್ ಹಾಗಿ ಕ್ಷೇತ್ರದಲ್ಲಿ ಮತಬೇಟೆ ನಡೆಸುತ್ತಿದ್ದಾರೆ.
ಅದರಂತೆ ಇಂದು ನನ್ನಿವಾಳ ಭಾಗದ ಹಲವು ಗ್ರಾಮಗಳಿಗೆ ತೆರಳಿದ ಕುಮಾರಸ್ವಾಮಿ ಮಾದ್ಯಮದೊಂದಿಗೆ ಮಾತನಾಡಿದ ಅವರು

Namma Challakere Local News
error: Content is protected !!