ಚಳ್ಳಕೆರೆ :

ಈಡೀ‌ ರಾಜ್ಯದಲ್ಲಿ ಮಹಾಮಾರಿ ಸಾಂಕ್ರಾಮಿಕ ರೋಗವು ಜನರ ನಿದ್ದೆ‌ ಗೆಡಿಸಿದೆ.

ಏರಿಕೆ ಮುಖವಾಗಿ ಸಾಗುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ಹತೋಟಿಗೆ ತರಲು ಅಧಿಕಾರಿಗಳ ಸನ್ನದರಾಗಬೇಕು ಎಂದು ರಾಜ್ಯ‌ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದ ತಾಲ್ಲೂಕು ಪಂಚಾಯತ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು.

ತಾಲ್ಲೂಕಿನ ಸುಮಾರು ನಲವತ್ತು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಚತೆ ಮಾಡಿಸುವ ಮೂಲಕ ಅಧಿಕಾರಿಗಳ ಡೆಂಗ್ಯೂ ಎಂಬ ಮಹಾ ಮಾರಿ ಖಾಯಿಲೆ ಹೊಡೆ‌ ದೊಡಿಸಬೇಕು.

ತಾಲೂಕಿನಲ್ಲಿ ಸುಮಾರು32 ಪ್ರಕರಣಗಳು ಇದ್ದು ಇವುಗಳನ್ನು ಹತೋಟಿಯಲ್ಲಿ ಇಡಬೇಕು, ಗ್ರಾಮದಲ್ಲಿ ಚರಂಡಿ, ರಸ್ತೆಗಳು ಈಗೇ ನೀರು ನಿಲ್ಲುವ ಹೊಂಡಗಳನ್ನು ಸ್ವಚ್ಚತೆ ಮಾಡುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು ಎಂದರು.

ಇದೇ ಸಂಧರ್ಭದಲ್ಲಿ ಹಲವು ರೈತ ಮುಖಂಡರು ಭಾಗವಹಿಸಿದ್ದರು ‌

Namma Challakere Local News
error: Content is protected !!