ಕರ್ನಾಟಕ ಮಾಧ್ಯಮ ಮಹಾಕೂಟ ಜಿಲ್ಲಾ ಅಧ್ಯಕ್ಷರಾಗಿ ಜಿಯಾ ಉಲ್ಲಾ ಆಯ್ಕೆ,,,

ಚಳ್ಳಕೆರೆ
ಒಬ್ಬ ಪತ್ರಕರ್ತ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಪತ್ರಕರ್ತರಾಗಿರುತ್ತಾರೆ ಇಂದಿನ ದಿನಮಾನಗಳಲ್ಲಿ ಪತ್ರಕರ್ತರ ಆರ್ಥಿಕ ಸ್ಥಿತಿ ಚಿಂತಾ ಜನಕವಾಗಿದೆ ಎಂದು ನೂತನ ಜಿಲ್ಲಾ ಅಧ್ಯಕ್ಷ ಜಿಯಾವುಲ್ಲ ತಿಳಿಸಿದರು

ಇವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿರುವ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆ ಅಧ್ಯಕ್ಷರನ್ನಾಗಿ ಸರ್ವಾನು ಮತದಿಂದ ಕರುನಾಡು ಜೀಯವುಲ್ಲಾ ಇವರನ್ನು ಆಯ್ಕೆ ಯಾಗಿ ಮಾತನಾಡಿದ ಇವರು ,

ಭಾರತ ದೇಶದಲ್ಲಿ ಪತ್ರಿಕಾ ಮಾಧ್ಯಮ ದೃಶ್ಯ ಮಾಧ್ಯಮವಾಗಲಿ ಕಾನೂನಿನ ನಾಲ್ಕನೇ ಅಂಗವಾಗಿದ್ದು, ದೇಶದ ಎಲ್ಲ ಸಮುದಾಯಗಳ ಮೇಲು-ಕಳು ಎನ್ನದೆ ಸಮಾಜಮುಖಿಯಾಗಿ ಪತ್ರಕರ್ತರು ತಮ್ಮ ನೈಜ್ಯ ವರದಿಯನ್ನು ಪ್ರಸಾದಿಸುತ್ತಾರೆ,

ಇಂತಹ ಪತ್ರಕರ್ತರಿಗೆ ಇಂದಿನ ದಿನಮಾನಗಳಲ್ಲಿ ನಮ್ಮನ್ನಾಳುವ ಸರ್ಕಾರಗಳು ಪತ್ರಕರ್ತರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಅಲ್ಲವೇ ಪತ್ರಕರ್ತರಿಗೆ ಯಾವುದೇ ರೀತಿಯಾಗಿ ಮೂಲಭೂತ ಸೌಕರ್ಯ ಕೊಡದೆ ಕಡೆಗೆನಿಸಿದ್ದಾರೆ, ಈ ಹಿನ್ನಲೆ ರಾಜಕಾರಣಿಗಳಿಗೆ ಪ್ರಸಾರ ಮಾಡುವ ಮಾಧ್ಯಮಗಳಾಗಲಿ ಪತ್ರಿಕೆ ರಂಗವಾಗಲಿ ದಿನನಿತ್ಯ ಅವರ ರಾಜಕೀಯ ಉಜ್ವಲ ಭವಿಷ್ಯವನ್ನು ಪ್ರಸಾರ ಮಾಡುವ ನಾವು ಇಂದಿನ ದಿನಮಾನಗಳಲ್ಲಿ ಪತ್ರಕರ್ತರ ಆರ್ಥಿಕ ಹೊರೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪತ್ರಕರ್ತರ ಮೇಲೆ ಯಾವುದೇ ರೀತಿಯ ಅನುದಾನ ಕೊಟ್ಟಿಲ್ಲವೆಂದು ಆಕ್ರೋಶಬರಿತವಾಗಿ ಹೇಳಿದರು,

ಇನ್ನು ಈ ವೇಳೆ ರಾಜ್ಯ ಅಧ್ಯಕ್ಷರಾದ ಕೆ ಶಿವಕುಮಾರ್ ನೂತನ ಜಿಲ್ಲಾಧ್ಯಕ್ಷರನ್ನು ಆಯ್ಕೆಯನ್ನು ಘೋಷಿಸಿದರು,

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಓಬಳೇಶ್, ಉಪಾಧ್ಯಕ್ಷ, ಅಧ್ಯಕ್ಷರಾಗಿ ಕೆ ರುದ್ರಮುನಿ, ಹಾಗೂ ಗ್ರಾಮಾಂತರ ಉಪಾಧ್ಯಕ್ಷ, ಜಿ, ಎನ್, ಜಯರಾಮ್, ಖಜಂಚಿಯಾಗಿ ಹೆಚ್ ರಾಜಪ್ಪ ಜಿಲ್ಲಾ ಸದಸ್ಯರನ್ನಾಗಿ ಆನಂದ್, ಮೂರ್ತಿ ಸಿಆರ್ ಅನಿಲ್ ಕುಮಾರ್, ಟಿ ಪರಮೇಶ್ವರ ನಾಯ್ಕ್ ,
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಡಿ ಈಶ್ವರಪ್ಪ ರಾಜ್ಯ ಉಪಾಧ್ಯಕ್ಷ ಸಂಪತ್ ಹೇಳಿದಂತೆ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು,

Namma Challakere Local News
error: Content is protected !!